ಬಾಳಸಂಗಾತಿ ಕಳೆದುಕೊಂಡ ನೋವಿನಲ್ಲೂ ಪತಿಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪತ್ನಿ

ಬಾಳಸಂಗಾತಿ ಕಳೆದುಕೊಂಡ ನೋವಿನಲ್ಲಿ ತಮ್ಮ ಪತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಹಿಳೆಯೊಬ್ಬರು ಸಾರ್ಥಕತೆ ಮೆರೆದಿದ್ದಾರೆ. ಅವರ ಈ ಕಾರ್ಯಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಆಲಘಟ್ಟ ಗೊಲ್ಲರಹಟ್ಟಿ ಗ್ರಾಮದ ಬಸವರಾಜು ಬೈಕಿನಲ್ಲಿ ತೆರಳುವಾಗ ಅಪಘಾತ ಸಂಭವಿಸಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶುಕ್ರವಾರದಂದು ಬಸವರಾಜು ಅವರಿಗೆ ಮೆದುಳು ನಿಷ್ಕ್ರಿಯಗೊಂಡಿರುವ ವಿಷಯವನ್ನು ವೈದ್ಯರು, ಅವರ ಪತ್ನಿ ಸುಶೀಲಾರಿಗೆ ತಿಳಿಸಿದ್ದು, ಇದರಿಂದ ತೀವ್ರ ದುಃಖಿತರಾದ ಅವರು ಕಣ್ಣೀರಿಡುತ್ತಲೇ ಪತಿಯ ಅಂಗಾಂಗಗಳನ್ನು ದಾನ ಮಾಡುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ.

ಸುಶೀಲಾ ಅವರ ಮನವಿಯ ಮೇರೆಗೆ ವೈದ್ಯರು ಶನಿವಾರ ಬೆಳಗ್ಗೆ ಬಸವರಾಜ್ ಅವರ ಅಂಗಾಂಗಗಳನ್ನು ಪಡೆದು ನಾಲ್ಕು ಮಂದಿಗೆ ಜೋಡಿಸಿ ಅವರುಗಳ ಪ್ರಾಣ ಉಳಿಸುವ ಕಾರ್ಯ ಮಾಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read