ನೀರು ಕಾಯಿಸಲು ಹೋದಾಗಲೇ ದುರಂತ; ವಿದ್ಯುತ್ ಪ್ರವಹಿಸಿ ತಾಯಿ – ಮಗು ಸಾವು

ನೀರು ಕಾಯಿಸಲೆಂದು ವಾಟರ್ ಹೀಟರ್ ಹಾಕಿದ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಕನಕ ನಗರದಲ್ಲಿ ಈ ಘಟನೆ ನಡೆದಿದ್ದು, ರಾಯಚೂರು ಮೂಲದ ಜ್ಯೋತಿ ಮತ್ತು ಅವರ ಮಗ ನಾಲ್ಕು ವರ್ಷದ ಜಯಾನಂದ ಮೃತಪಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ ಜ್ಯೋತಿ ನೀರು ಕಾಯಿಸುವ ಸಲುವಾಗಿ ಹೀಟರ್ ಹಾಕಿದ್ದು, ಅವರ ಮಗ ಮೈ ಮೇಲೆ ಬೀಳಿಸಿಕೊಂಡಿದ್ದಾನೆ. ಇದರಿಂದಾಗಿ ಆತನಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಆತನನ್ನು ರಕ್ಷಿಸಲು ಹೋದ ಜ್ಯೋತಿ ಅವರಿಗೂ ಕೂಡ ವಿದ್ಯುತ್ ಶಾಕ್ ತಗುಲಿದೆ. ಇದರ ಪರಿಣಾಮ ತಾಯಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read