ಕೆಲಸದಿಂದ ತೆಗೆದ ಮ್ಯಾನೇಜರ್ ಎದೆಗೆ ಗುಂಡು ಹಾರಿಸಿದ ಮಾಜಿ ಉದ್ಯೋಗಿ

ಉತ್ತರಪ್ರದೇಶದ ನೋಯ್ಡಾ ಮತ್ತೊಮ್ಮೆ ಅಪರಾಧ ಕೃತ್ಯಕ್ಕೆ ಸುದ್ದಿಯಲ್ಲಿದೆ. ಆಘಾತಕಾರಿ ಘಟನೆಯೊಂದರಲ್ಲಿ ನೋಯ್ಡಾ ಮೂಲದ ಬಿಪಿಒದ ಮಾಜಿ ಉದ್ಯೋಗಿಯೊಬ್ಬರು ತನ್ನನ್ನು ಕೆಲಸದಿಂದ ವಜಾಗೊಳಿಸಿದ ಆರು ತಿಂಗಳ ನಂತರ ತಮ್ಮ ಮ್ಯಾನೇಜರ್ ಎದೆಗೆ ಗುಂಡು ಹಾರಿಸಿದ್ದಾರೆ.

ವರದಿಗಳ ಪ್ರಕಾರ ಗಾಯಗೊಂಡ ಮ್ಯಾನೇಜರ್ ಅನ್ನು ನೋಯ್ಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ನೋಯ್ಡಾದ ಹಂತ-1 ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಎಸ್‌ಬಿ ಬಿಪಿಒ ಸರ್ಕಲ್ ಹೆಡ್ ಶಾರ್ದುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಮ್ಯಾನೇಜರ್ ಬಲ ಭುಜಕ್ಕೆ ಶಂಕಿತ ಗುಂಡು ಹಾರಿಸಿದ್ದಾನೆ.

ನೊಯ್ಡಾ ವಲಯದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) -2 ಸುಶೀಲ್ ಕುಮಾರ್ ಗಂಗಾ ಪ್ರಸಾದ್ ಮಾತನಾಡಿ ಶಂಕಿತ ಆರೋಪಿ ಅನೂಪ್ ಸಿಂಗ್ ಪೂರ್ವ ದೆಹಲಿಯ ನಿವಾಸಿಯಾಗಿದ್ದು, ಘಟನೆ ನಂತರ ನಾಪತ್ತೆಯಾಗಿದ್ದಾನೆ. ಆತನನ್ನು ಕೆಟ್ಟ ನಡವಳಿಕೆಯಿಂದಾಗಿ ತನ್ನ ಕೆಲಸದಿಂದ ವಜಾ ಮಾಡಲಾಗಿದೆ. ಮ್ಯಾನೇಜರ್ ಶಾರ್ದೂಲ್ ಇಸ್ಲಾಂ ಇತರರ ಮುಂದೆ ಅವಮಾನಿಸಿದ್ದಕ್ಕಾಗಿ ಅನೂಪ್ ಸಿಂಗ್ ಕೋಪಗೊಂಡಿದ್ದ ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read