ಕುಡಿದು ಕುಣಿಯುತ್ತಿದ್ದವರ ನೋಡಲು ಬಂದ ಯುವಕನ ಬೆತ್ತಲೆಗೊಳಿಸಿ ಹಲ್ಲೆ

ಹಾಸನ: ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕುಡಿದ ಅಮಲಿನಲ್ಲಿ ಯುವಕನ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಸಂಜೆ ಅರಕಲಗೂಡಿನಲ್ಲಿ ಘಟನೆ ನಡೆದಿದೆ. ರಂಜಿತ್, ದಯಾನಂದ, ಆನಂದ್, ಪ್ರತಾಪ್ ಎಂಬುವರು ಕಂಠಪೂರ್ತಿ ಮದ್ಯ ಸೇವನೆ ಮಾಡಿ ಬಾರ್ ಎದುರು ಕುಣಿದಾಡುತ್ತಿದ್ದರು. ಇವರನ್ನು ನೋಡಲು ಬಂದ ಯುವಕನನ್ನು ಎಳೆದಾಡಿ ಆತನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಯುವಕನಿಗೆ ಕಾರ್ ನಿಂದ ಡಿಕ್ಕಿ ಹೊಡೆಸುವ ಯತ್ನ ಮಾಡಿದ್ದಾರೆ.

ಮದ್ಯ ಸೇವನೆ ಮಾಡಿ ಯುವಕನ ನಗ್ನಗೊಳಿಸಿ ಹಲ್ಲೆ ಮಾಡಿ ಹುಚ್ಚಾಟ ಮೆರೆದ ಯುವಕರ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read