ಉರಿ ಗೌಡ – ನಂಜೇಗೌಡ ಕಾಲ್ಪನಿಕ ಪಾತ್ರ: ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡರ ಹೇಳಿಕೆ

ಟಿಪ್ಪುವನ್ನು ಕೊಂದಿದ್ದು ಉರಿ ಗೌಡ ಹಾಗೂ ನಂಜೇಗೌಡ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದು, ಇದರ ಮಧ್ಯೆ ಲಾವಣಿಯಲ್ಲಿ ಈ ಕುರಿತ ಉಲ್ಲೇಖ ಇದೆ ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿರುವ ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡ, ಟಿಪ್ಪುವನ್ನು ಕೊಂದಿದ್ದು, ಬ್ರಿಟಿಷರ ಸೈನಿಕ. ಇದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆ ಇದೆ ಎಂದಿದ್ದಾರೆ.

ಉರಿ ಗೌಡ, ನಂಜೇಗೌಡ ಕಾಲ್ಪನಿಕ ಪಾತ್ರ ಎಂದು ಹೇಳಿರುವ ಅವರು ಟಿಪ್ಪು ಸುಲ್ತಾನ್ ಕುರಿತು ಬ್ರಿಟಿಷರು ಕ್ಷಣ ಕ್ಷಣದ ಮಾಹಿತಿಯನ್ನು ದಾಖಲಿಸಿದ್ದು, ಹೀಗಾಗಿ ಟಿಪ್ಪುವನ್ನು ಕೊಂದಿದ್ದು ಬ್ರಿಟಿಷರ ಸೈನಿಕ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read