‘ಅದೃಷ್ಟ’ಕ್ಕಾಗಿ ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ಅಕ್ಷಯ ತೃತೀಯವೆಂದು ಕರೆಯಲಾಗುತ್ತದೆ. ಈ ಬಾರಿ ಮೇ 14ರಂದು ಅಕ್ಷಯ ತೃತೀಯ ಬಂದಿದೆ. ಈ ದಿನ ನೀವು ಯಾವುದೇ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ.

ಅಕ್ಷಯ ತೃತೀಯದಂದು ಮದುವೆ, ಮನೆ ಪ್ರವೇಶ, ಮುಂಜಿಯಂತಹ ಶುಭ ಕೆಲಸಗಳನ್ನು ಮಾಡಬಹುದು.

ಬಟ್ಟೆ, ಭೂಮಿ, ವಾಹನ ಖರೀದಿಗೆ ಇದು ಶುಭ ದಿನ.

ಈ ದಿನ ಹೊಸ ಬಟ್ಟೆ, ಬಂಗಾರವನ್ನು ಧರಿಸುವುದು ಮಂಗಳಕರ. ಹೊಸ ಸಂಘಟನೆ ಮತ್ತು ಉದ್ಯೋಗವನ್ನು ಶುರು ಮಾಡಬಹುದು.

ಈ ದಿನ ಗಂಗೆ ಸ್ನಾನ ಹಾಗೂ ಪೂಜೆ ಮಾಡಿದ್ರೆ ಎಲ್ಲ ಪಾಪ ಕಳೆದು ಹೋಗುತ್ತದೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯದಂದು ದಾನಕ್ಕೆ ವಿಶೇಷ ಮಹತ್ವವಿದೆ.

ಕರ್ಬೂಜ, ಫ್ಯಾನ್, ಛತ್ರಿ ಸೇರಿದಂತೆ ದೇಹಕ್ಕೆ ತಂಪು ನೀಡುವ ವಸ್ತುಗಳನ್ನು ದಾನ ಮಾಡಬೇಕು.

ಅದೃಷ್ಟಕ್ಕಾಗಿ ಅಕ್ಷಯ ತೃತೀಯದ ದಿನ ಶಂಖ, ನವಿಲು ಗರಿಯನ್ನು ಖರೀದಿ ಮಾಡಬೇಕು.

ಈ ದಿನ ಬಂಗಾರ-ಬೆಳ್ಳಿ ಖರೀದಿ ಮಾಡಿದ್ದರೆ ಅದನ್ನು ಮೊದಲು ದೇವಿ ಲಕ್ಷ್ಮಿ ಮುಂದಿಟ್ಟು ಪೂಜೆ ಮಾಡಬೇಕು. ನಂತ್ರ ಧರಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read