ಬೆಂಗಳೂರು : ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಅವಕಾಶವಿಲ್ಲ, ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಭಯೋತ್ಪಾದಕರಿಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಅವಕಾಶ ಇಲ್ಲ. ಇಸ್ಲಾಂ ಧರ್ಮದ ಪ್ರಕಾರ ಭಯೋತ್ಪಾದನೆ ಮಾಡುವವನು ಮುಸ್ಲಿಂ ಅಲ್ಲ, ಹಾಗೇನಾದ್ರೂ ಮಾಡಿದ್ರೆ ಅವನು ಹುಳ ಬಿದ್ದು ಸಾಯ್ತಾನೆ ಎಂದರು.
ಬಿಹಾರ ಚುನಾವಣೆಗಿಂತ ಒಂದು ದಿನದ ಮುಂಚೆ ಬ್ಲಾಸ್ಟ್ ಹೇಗೆ ಆಯಿತು. ಹಾಗೇನಾದ್ರೂ ಆಗಿದ್ರೆ ಯಾರೂ ಒಳ್ಳೆಯದಾಗಲ್ಲ ಎಂದರು. ನ.11 ಕ್ಕೆ ಬಿಹಾರ ಚುನಾವಣೆ ನಡೆಯಿತು, ಒಂದು ದಿನದ ಮುಂದೆ ಬ್ಲಾಸ್ಟ್ ಆಗಿದೆ..ಇದೆಲ್ಲಾ ಹೇಗೆ ಎಂದು ಜಮೀರ್ ಪ್ರಶ್ನಿಸಿದರು.
