alex Certify ‘ಕಾಂಗರೂ’ ಆಕೃತಿಯ ಕೇಕ್​ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ ರಹಾನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂಗರೂ’ ಆಕೃತಿಯ ಕೇಕ್​ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ ರಹಾನೆ..!

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ಹಂಗಾಮಿ ನಾಯಕ ಭಾರತೀಯರ ಪಾಲಿಗೆ ಹೀರೋ ಎನಿಸಿದ್ದಾರೆ. ಆಸ್ಟ್ರೇಲಿಯಾ ಟೂರ್​ನಿಂದ ತವರೂರಾದ ದದಾರ್​ಗೆ ಬುಧವಾರ ರಾತ್ರಿ ರಹಾನೆ ಆಗಮಿಸಿದ್ದಾರೆ.

ಐತಿಹಾಸಿಕ ಸಾಧನೆಯನ್ನ ಸಂಭ್ರಮಿಸೋಕೆ ಅಭಿಮಾನಿಗಳು ಹಾಗೂ ಸ್ಥಳೀಯರು ಕಾಂಗರೂ ಆಕೃತಿಯ ಕೇಕ್​ನ್ನ ರಹಾನೆ ಕೈಯಲ್ಲಿ ಕತ್ತರಿಸೋಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಕೇಕ್​ ಕತ್ತರಿಸಲು ರಹಾನೆ ನಿರಾಕರಿಸಿದ್ದಾರೆ.

ಸ್ಥಳೀಯ ಮಾಧ್ಯಮದಲ್ಲಿ ಈ ಘಟನೆ ನೇರ ಪ್ರಸಾರ ಕಂಡಿದೆ. ಇದರಲ್ಲಿ ರಹಾನೆ ತಮ್ಮ ಮಗಳನ್ನ ಎತ್ತಿಕೊಂಡಿದ್ದಾರೆ. ಅವರ ಎದುರಲ್ಲಿ ಕಾಂಗರೂ ಆಕೃತಿಯ ಕೇಕ್​ ಇರೋದನ್ನ ಕಾಣಬಹುದಾಗಿದೆ. ಕ್ರಿಕೆಟ್​ ಮೈದಾನದ ಮೇಲೆ ಕುಳಿತ ಕಾಂಗರೂ ಭಾರತದ ಬಾವುಟವನ್ನ ಹಿಡಿದಿರುವ ರೀತಿಯಲ್ಲಿ ಕೇಕ್​ನ್ನು ವಿನ್ಯಾಸಗೊಳಿಸಲಾಗಿತ್ತು.

ಈ ಕೇಕ್ ನ್ನ ಚೆಫ್​ ಬೇಕರಿ ಮುಖ್ಯಸ್ಥೆ ಅದಿತಿ ಲಿಮಾಯೆ ಕಾಮನ್​ ಎಂಬವರು ವಿನ್ಯಾಸಗೊಳಿಸಿದ್ದರು. ಅವರ ಬ್ಯುಸಿನೆಸ್​ ಪಾರ್ಟ್ನರ್​ ಹಾಗೂ ಮಾಜಿ ರಣಜಿ ಆಟಗಾರ ಜೀತೇಂದ್ರ ಠಾಕ್ರೆ ನೀಡಿದ ಐಡಿಯಾದಂತೆ ಈ ಕೇಕ್​ನ್ನ ವಿನ್ಯಾಸಗೊಳಿಸಲಾಗಿತ್ತು. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಗೆ ಗೌರವ ತೋರಿದ ಅಜಿಂಕ್ಯ ರಹಾನೆ ಕ್ರಮಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿದು ಬರ್ತಿದೆ.

— Anubhav Chatterjee (@anubhav__tweets) January 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...