alex Certify ದೇಸೀ ಕ್ರಿಕೆಟ್‌ಗೆ ಶ್ರೀಶಾಂತ್ ಭರ್ಜರಿ ರೀ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಸೀ ಕ್ರಿಕೆಟ್‌ಗೆ ಶ್ರೀಶಾಂತ್ ಭರ್ಜರಿ ರೀ ಎಂಟ್ರಿ

ಸ್ಪಾಟ್‌ ಫಿಕ್ಸಿಂಗ್ ನಿಷೇಧದಿಂದ ಹೊರಬಂದ ಬಳಿಕ ಆಟದ ಅಂಗಳಕ್ಕೆ ಮರಳಿರುವ ಟೀಂ ಇಂಡಿಯಾ ಮಾಜಿ ವೇಗಿ ಶ್ರೀಶಾಂತ್‌, ಉತ್ತರ ಪ್ರದೇಶದ ವಿರುದ್ಧ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಕೇರಳ ತಂಡಕ್ಕೆ ಗೆಲುವು ತಂದಿತ್ತಿದ್ದಾರೆ.

ಐಪಿಎಲ್‌ 2021ರ ಹರಾಜಿನಲ್ಲಿ ಸ್ಥಾನ ಪಡೆಯಲು ವಿಫಲವಾದ ಶ್ರೀಶಾಂತ್‌, ಎಂಟು ವರ್ಷಗಳ ಬಳಿಕ ತಾವಾಡಿದ ಮೊದಲ ಲಿಸ್ಟ್‌ ಎ ಪಂದ್ಯದಲ್ಲಿ 65 ರನ್ನಿತ್ತು 5 ವಿಕೆಟ್ ಪಡೆದಿದ್ದಾರೆ.

ಏರ್‌ ಪಾಡ್‌ ಕಳೆದುಕೊಂಡು ಕಂಗಾಲಾಗಿದ್ದವರಿಗೆ ಸಿಕ್ತು ದೊಡ್ಡ ‌ʼಗಿಫ್ಟ್ʼ

ಸ್ಪಾಟ್‌ ಫಿಕ್ಸಿಂಗ್ ವಿರುದ್ಧ ತಮ್ಮ ಮೇಲೆ ವಿಧಿಸಲಾಗಿದ್ದ ಜೀವಾವಧಿ ನಿಷೇಧದ ವಿರುದ್ಧ ಕೋರ್ಟ್‌ನಲ್ಲಿ ಹೋರಾಡಿ ಗೆದ್ದ ಶ್ರೀಶಾಂತ್‌, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ 5 ವಿಕೆಟ್ ಗೊಂಚಲು ಪಡೆದುಕೊಂಡಿದ್ದಾರೆ.

ಟೀಂ ಇಂಡಿಯಾ ತಂಡವನ್ನು ಮತ್ತೊಮ್ಮೆ ಪ್ರತಿನಿಧಿಸುವ ಆಸೆಯನ್ನು 37ರ ಹರೆಯದ ವೇಗಿ ಇನ್ನೂ ಇಟ್ಟುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...