ಬೀದರ್: ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.
8 ವರ್ಷದ ಬಾಲಕಿ ರುತ್ವಿ ಮೃತ ಬಾಲಕಿ. ಗಡಿಕುಶನೂರು ಮೂಲದ ಬಾಲಕಿ ಗುರುನಾನಕ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದಳು. ಶಾಲೆ ಬಸ್ ಇಳಿದು ಕೆಳಗೆ ನಿಂತಿದ್ದನ್ನು ಗಮನಿಸದ ಬಸ್ ಚಾಲಕ ಮುಂದೆ ಚಲಿಸಿದ್ದಾನೆ. ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸಾವನ್ನಪ್ಪಿದ್ದಾಳೆ.
ಖಾಸಗಿ ಬಸ್ ಚಾಲಕನ ನಿರ್ಲಕ್ಷಕ್ಕೆ ಬಾಲಕಿ ಜೀವವೇ ಹೋಗಿದೆ. ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
