alex Certify ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಹಸನ: ಯಾರಾಗಲಿದ್ದಾರೆ ಮುಂದಿನ ಸಿಎಂ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಹಸನ: ಯಾರಾಗಲಿದ್ದಾರೆ ಮುಂದಿನ ಸಿಎಂ….?

ರಾಜ್ಯದಲ್ಲಿ ಯಡಿಯೂರಪ್ಪ ರಾಜೀನಾಮೆ ವಿಚಾರ ಸದ್ದು ಮಾಡ್ತಿರೋದು ಒಂದೆಡೆಯಾದ್ರೆ ಯಡಿಯೂರಪ್ಪ ರಾಜೀನಾಮೆ ಬಳಿಕ ರಾಜ್ಯದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈಗಾಗಲೇ ಸಾಕಷ್ಟು ಹೆಸರುಗಳು ಸಿಎಂ ರೇಸ್​ನಲ್ಲಿ ಕೇಳಿಬರ್ತಿದೆ.

ಬಿಜೆಪಿ ಹೈಕಮಾಂಡ್​ ಸದಾ ಅಚ್ಚರಿಯ ಹೆಸರುಗಳನ್ನ ಆಯ್ಕೆ ಮಾಡೋದ್ರಲ್ಲಿ ಎತ್ತಿದ ಕೈ. ಯುಪಿ ಚುನಾವಣೆ, ಗುಜರಾತ್​ ಚುನಾವಣೆಗಳಲ್ಲಿ ಸಿಎಂ ಹೆಸರು ಆಯ್ಕೆ ಮಾಡಿರೋದು ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹೀಗಾಗಿ ಅನುಭವಿ ನಾಯಕರೇ ಸಿಎಂ ಆಗ್ತಾರೆ ಎಂಬ ಮಾತನ್ನು ನಾವು ಗಂಭೀರವಾಗಿ ಪರಗಣಿಸುವಂತಿಲ್ಲ. ಬಿಜೆಪಿ ಹೈಕಮಾಂಡ್​ ತನ್ನ ಪ್ರತಿಬಾರಿಯ ರೂಢಿಯಂತೆ ಅಚ್ಚರಿಯ ಹೆಸರೊಂದನ್ನ ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ.

ಪ್ರಹ್ಲಾದ್​ ಜೋಷಿ : ಕೇಂದ್ರ ಸರ್ಕಾರದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡು ಬಂದಿರುವ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೆಸರು ಸಿಎಂ ರೇಸ್​ನಲ್ಲಿ ಇದ್ದಾರೆ. ಸಿಎಂ ಸ್ಥಾನಕ್ಕೆ ಬಹಳ ಹಿಂದಿನಿಂದಲೂ ಕಣ್ಣಿಟ್ಟಿದ್ದ ಜೋಶಿಗೆ ಈ ಬಾರಿ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

ಬಸವರಾಜ ಬೊಮ್ಮಾಯಿ : ರಾಜ್ಯದ ಗೃಹಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಪಕ್ಷದಲ್ಲಿ ತಮ್ಮದೇ ಪ್ರಭಾವವನ್ನ ಹೊಂದಿದ್ದಾರೆ. ಯಡಿಯೂರಪ್ಪರ ಬದಲು ಹೈಕಮಾಂಡ್​ ಮತ್ತೊಮ್ಮೆ ಲಿಂಗಾಯತ ನಾಯಕನನ್ನೇ ಹುಡುಕಿದ್ದಲ್ಲಿ ಬೊಮ್ಮಾಯಿ ಸಿಎಂ ಆಗೋದು ಬಹುತೇಕ ಪಕ್ಕಾ ಆಗಲಿದೆ.

ಮುರುಗೇಶ ನಿರಾಣಿ : ಬಿಎಸ್​ವೈ ಸಂಪುಟದಲ್ಲಿ ಸ್ಥಾನ ಪಡೆದಿರುವ ನಿರಾಣಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ. ಆರ್​​ಎಸ್​ಎಸ್​ ಹಾಗೂ ಪಂಚಮಸಾಲಿ ಸಮುದಾಯದ ಬೆಂಬಲ ನಿರಾಣಿಗಿರುವ ಪ್ಲಸ್​ ಪಾಯಿಂಟ್​ ಆಗಿದೆ.

ಇನ್ನುಳಿದಂತೆ ರಾಜಕೀಯ ಜೀವನದಲ್ಲಿ ಕ್ಲೀನ್​​ ಚಿಟ್​ ಹೊಂದಿರುವ ಅಶ್ವತ್ಥ ನಾರಾಯಣ, ಒಕ್ಕಲಿಗ ನಾಯಕ ಸಿ.ಟಿ ರವಿ, ಶಾಸಕ ಅರವಿಂದ ಬೆಲ್ಲದ್​ ಹಾಗೂ ಸಚಿವ ಆರ್​.ಅಶೋಕ್​ ಕೂಡ ಈ ಬಾರಿ ರಾಜ್ಯದ ಸಿಎಂ ಗದ್ದುಗೆ ಏರಿದರೆ ಯಾವುದೇ ಆಶ್ಚರ್ಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...