alex Certify ಪ್ರೀತಿಯಲ್ಲಿ ಹುಚ್ಚರಾದವರಿಗೆ ಈ ದೇವಸ್ಥಾನದಲ್ಲಿ ಸಿಗುತ್ತೆ ಚಿಕಿತ್ಸೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯಲ್ಲಿ ಹುಚ್ಚರಾದವರಿಗೆ ಈ ದೇವಸ್ಥಾನದಲ್ಲಿ ಸಿಗುತ್ತೆ ಚಿಕಿತ್ಸೆ…!

ದೇವಾಲಯಗಳ ದೇಶ ಭಾರತ. ಇಲ್ಲಿ ಕೋಟ್ಯಾಂತರ ದೇವಸ್ಥಾನಗಳಿವೆ. ದೇವರ ದರ್ಶನ ಮಾಡಲು ಪ್ರತಿದಿನ ಭಕ್ತರು ದೇವಸ್ಥಾನಗಳಿಗೆ ಬರ್ತಾರೆ. ದೇಶದಲ್ಲಿ ವಿವಿಧ ದೇವಸ್ಥಾನಗಳಿವೆ. ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಪ್ರೇಮಿಗಳನ್ನು ಸರಿಪಡಿಸುವ ದೇವಸ್ಥಾನವೂ ಭಾರತದಲ್ಲಿದೆ.

ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳ ದೇಹದಲ್ಲಿರುವ ಪ್ರೀತಿ ದೆವ್ವಗಳನ್ನು ಹೊರತೆಗೆಯುವ ದೇವಸ್ಥಾನವೊಂದು ಭಾರತದಲ್ಲಿದೆ. ಉತ್ತರ ಪ್ರದೇಶದ ಸಹರಾನ್ಪುರದ ಬೆಹತ್ ರಸ್ತೆಯಲ್ಲಿರುವ ಭಗವಾನ್ ಹನುಮಾನ್ ದೇವಸ್ಥಾನ ಇದಕ್ಕೆ ಪ್ರಸಿದ್ಧಿ ಪಡೆದಿದೆ. ಇದನ್ನು ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಂದಿನಿಂದ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಬರ್ತಾರೆ. ದೇವಾಲಯದಲ್ಲಿ ಕಾಲಭೈರವ, ಪ್ರೇತರಾಜ್ ಮತ್ತು ರಾಮನ ಮೂರ್ತಿಗಳಿವೆ.

ಪ್ರತಿ ಮಂಗಳವಾರ ಮತ್ತು ಶನಿವಾರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನಂತರ ದೇವಾಲಯದ ಅರ್ಚಕರು ಪ್ರೀತಿಯಲ್ಲಿ ಹುಚ್ಚರಾಗಿರುವ ಯುವಕರಿಗೆ ಮತ್ತು ಅವರ ಕುಟುಂಬಗಳಿಗೆ ಕೆಲವು ಪರಿಹಾರಗಳನ್ನು ಹೇಳುತ್ತಾರೆ. ಈ ದೇವಾಲಯದ ಅರ್ಚಕರು ಸೂಚಿಸಿದ ಕ್ರಮಗಳನ್ನು ಪಾಲಿಸಿದ್ರೆ, ಪ್ರೀತಿಯ ಭೂತ, ಭಕ್ತರ ತಲೆಯಿಂದ ಹೊರ ಹೋಗುತ್ತದೆಯಂತೆ. ಇಲ್ಲಿಯವರೆಗೆ ಅನೇಕರು ಇದ್ರ ಲಾಭ ಪಡೆದಿದ್ದಾರೆ. ದೂರದ ಊರುಗಳಿಂದ ನೂರಾರು ಭಕ್ತರು ಪ್ರತಿ ದಿನ ಇಲ್ಲಿಗೆ ಬರ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...