alex Certify ದ್ರಾವಿಡ್ ಪುತ್ರನೊಂದಿಗೆ ಮಾತನಾಡಿದ್ದ ಸಂಗತಿಯನ್ನು ಮೆಲುಕು ಹಾಕಿದ ಗಂಗೂಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ರಾವಿಡ್ ಪುತ್ರನೊಂದಿಗೆ ಮಾತನಾಡಿದ್ದ ಸಂಗತಿಯನ್ನು ಮೆಲುಕು ಹಾಕಿದ ಗಂಗೂಲಿ..!

ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿರುವ ರಾಹುಲ್​ ದ್ರಾವಿಡ್ ತಂಡವನ್ನು ಯಾವೆಲ್ಲ ರೀತಿಯಲ್ಲಿ ಮುನ್ನೆಡಸಬೇಕೆಂದು ಪ್ಲಾನ್​ ಮಾಡ್ತಿದ್ದಾರೆ. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​, ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿ ಆಯ್ಕೆಯಾಗುವ ಮುನ್ನ ದ್ರಾವಿಡ್​ರ ಪುತ್ರನೊಂದಿಗೆ ಫೋನ್​ನಲ್ಲಿ ನಡೆಸಿದ ಫನ್ನಿ ಸಂಭಾಷಣೆಯ ನೆನಪುಗಳನ್ನು ಹಂಚಿಕೊಂಡ್ರು. ನಾವು ದ್ರಾವಿಡ್​ರನ್ನು ಮುಖ್ಯ ಕೋಚ್​ ಆಗಿ ನೇಮಿಸಲು ಆ ಫೋನ್​ ಕರೆಯೇ ಕಾರಣ ಎಂದು ತಮಾಷೆಯಾಗಿ ಹೇಳಿದ್ರು.

40ನೇ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮಾತನಾಡಿದ ಗಂಗೂಲಿ, ನನಗೆ ಒಮ್ಮ ರಾಹುಲ್​ ಪುತ್ರ ಕರೆ ಮಾಡಿ ನನ್ನ ತಂದೆ ನನ್ನೊಂದಿಗೆ ತುಂಬಾ ಸ್ಟ್ರಿಕ್ಟ್​ ಆಗಿ ವರ್ತಿಸುತ್ತಿದ್ದಾರೆ. ಹೀಗಾಗಿ ನೀವು ಅವರನ್ನು ಕರೆದುಕೊಂಡು ಹೋಗಿ ಎಂದಿದ್ದನಂತೆ. ಇದಾದ ಬಳಿಕ ನಾನು ದ್ರಾವಿಡ್​ಗೆ ಕರೆ ಮಾಡಿ ನೀವು ಟೀಂ ಇಂಡಿಯಾಗೆ ಸೇರುವ ಅವಕಾಶ ಬಂದಿದೆ ಎಂದು ಹೇಳಿದ್ದೆ ಅಂತಾ ಹಳೆಯ ನೆನಪನ್ನು ಮೆಲುಕು ಹಾಕಿದ್ರು.

ಟಿ 20 ವರ್ಲ್ಡ್​ ಕಪ್​ ಬಳಿಕ ರವಿಶಾಸ್ತ್ರಿ ಟೀಂ ಇಂಡಿಯಾದ ಮುಖ್ಯ ಕೋಚ್​ ಸ್ಥಾನದಿಂದ ಕೆಳಗಿಳಿದಿದ್ದಾರೆ. 2 ವರ್ಷಗಳಿಗೆ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿ ನೇಮಕಗೊಂಡಿರುವ ದ್ರಾವಿಡ್​ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ಮಾರ್ಗದರ್ಶನ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...