alex Certify ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀನಿವಾಸ್​ ಪ್ರಸಾದ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀನಿವಾಸ್​ ಪ್ರಸಾದ್​

ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಾರೆ ಎಂಬ ವಿಚಾರ ಕಾವೇರಿರುವ ಬೆನ್ನಲ್ಲೇ ಸಂಸದ ಶ್ರೀನಿವಾಸ್​ ಪ್ರಸಾದ್​ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಚಾಮರಾಜನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್​ ಹಾಗೂ ಯಡಿಯೂರಪ್ಪ ನಡುವೆ ನಡೆದಿದ್ದ ಒಪ್ಪಂದದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಯಡಿಯೂರಪ್ಪ ಹಾಗೂ ಹೈಕಮಾಂಡ್​ ನಡುವೆ ಒಂದು ಒಪ್ಪಂದವಾಗಿತ್ತು. ಅಧಿಕಾರಕ್ಕೆ ಏರುವ ಮುನ್ನವೇ ಹೈಕಮಾಂಡ್​ ಯಡಿಯೂರಪ್ಪಗೆ ನೀವು 2 ವರ್ಷಗಳ ಕಾಲ ಮಾತ್ರ ಸಿಎಂ ಆಗಿ ಇರಲಿದ್ದೀರಿ. ನಿಮಗೆ ವಯಸ್ಸಾಗಿದ್ದರೂ ನಾವು ನಿಮ್ಮ ಕೈಗೆ ಅಧಿಕಾರ ನೀಡುತ್ತಿದ್ದೇವೆ. ಆದರೆ ಈ ಅಧಿಕಾರಾವಾಧಿಯಲ್ಲಿ 2ವರ್ಷ ಮಾತ್ರ ನೀವು ಮುಂದುವರಿಯಲಿದ್ದೀರಿ ಎಂದು ಹೈಕಮಾಂಡ್​ ಮೊದಲೇ ಬಿಎಸ್​ವೈಗೆ ಹೇಳಿತ್ತು ಎಂದು ಸ್ಫೋಟಕ ಮಾಹಿತಿಯೊಂದನ್ನ ಬಾಯ್ಬಿಟ್ಟಿದ್ದಾರೆ.

75 ವರ್ಷಕ್ಕಿಂತ ಮೇಲ್ಪಟ್ಟವರನ್ನ ಸಿಎಂ ಮಾಡಬಾರದು ಅನ್ನೋದು ಬಿಜೆಪಿಯ ನಿಲುವಾಗಿದೆ. ಆದರೆ ವಿಶೇಷ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರು. ಇದೀಗ ಹೈಕಮಾಂಡ್​ ನೀಡಿದ್ದ ಅವಧಿ ಕೊನೆಗೊಂಡಿದೆ. ಹೀಗಾಗಿ ಈ ಹಿಂದಿನ ಮಾತುಕತೆಯಂತೆಯೇ ಯಡಿಯೂರಪ್ಪ ನಡೆದುಕೊಳ್ತಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...