alex Certify SHOCKING NEWS: ಸೌದಿಗೆ ತೆರಳಿದ್ದ ಪತ್ನಿ ವಾಪಸ್ ಬರಲು ನಿರಾಕರಣೆ; ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸೌದಿಗೆ ತೆರಳಿದ್ದ ಪತ್ನಿ ವಾಪಸ್ ಬರಲು ನಿರಾಕರಣೆ; ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಪತಿ

ತುಮಕೂರು: ತಂದೆಯೊಬ್ಬ ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನ ಪಿ ಹೆಚ್ ಕಾಲೋನಿಯಲ್ಲಿ ನಡೆದಿದೆ.

ಸಮೀವುಲ್ಲಾ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಮಕ್ಕಳಿಬ್ಬರನ್ನೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಮೀವುಲ್ಲಾ ಪತ್ನಿ ಸಾಯಿರಾ ಬಾನು 4 ವರ್ಷಗಳ ಹಿಂದೆ ಕೆಲಸಕ್ಕಾಗಿ ಸೌದಿಗೆ ತೆರಳಿದ್ದಳು. ಆಗಾಗ ವಿಡಿಯೋ ಕಾಲ್ ಮೂಲಕ ಮಕ್ಕಳು ಹಾಗೂ ಪತಿಯೊಂದಿಗೆ ಮಾತನಾಡುತ್ತಿದ್ದಳು. ಪತಿ ಸಮಿವುಲ್ಲಾ ಹಾಗೂ ಮಕ್ಕಳು ಇತ್ತಿಚೆಗೆ ಸಾಯಿರಾ ಬಾನುಗೆ ವಾಪಸ್ ಬರುವಂತೆ ಹೇಳಿದ್ದರು. ಆದರೆ ಸೌದಿಯಿಂದ ವಾಪಸ್ ಆಗಲು ಸಾಯಿರಾ ನಿರಾಕರಿಸಿದ್ದಳು. ಅಲ್ಲದೇ ಸೌದಿಯಲ್ಲಿ ಕೆಲಸಕ್ಕೆ ಹೋಗಿದ್ದ ಆಕೆ ಮೋಜು-ಮಸ್ತಿಯಲ್ಲಿ ತೊಡಗಿದ್ದಳು ಎನ್ನಲಾಗಿದೆ.

ಕಳೆದ 3-4 ತಿಂಗಳಿಂದ ಮಕ್ಕಳು ಹಾಗೂ ಪತಿಯ ಫೋನ್ ಸಂಪರ್ಕಕ್ಕೂ ಸಾಯಿರಾ ಬಾನು ಸಿಕ್ಕಿರಲಿಲ್ಲ. ಇದರಿಂದ ನೊಂದ ಪತಿ ಸಮೀವುಲ್ಲಾ ಮಕ್ಕಳಿಬ್ಬರಿಗೂ ವಿಷವುಣಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಮೀವುಲ್ಲಾ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರೆ ಮಕ್ಕಳಿಬ್ಬರೂ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...