alex Certify SHOCKING NEWS: ಮಹಿಳೆಯರ ಎದುರು ಅಸಭ್ಯ ವರ್ತನೆ; ಪ್ರಶ್ನಿಸಿದವರಿಗೆ ದೃಷ್ಟಿ ಕಳೆದುಕೊಳ್ಳುವಂತೆ ಹಲ್ಲೆ ನಡೆಸಿದ ಪಾಪಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮಹಿಳೆಯರ ಎದುರು ಅಸಭ್ಯ ವರ್ತನೆ; ಪ್ರಶ್ನಿಸಿದವರಿಗೆ ದೃಷ್ಟಿ ಕಳೆದುಕೊಳ್ಳುವಂತೆ ಹಲ್ಲೆ ನಡೆಸಿದ ಪಾಪಿಗಳು

ಚಾಮರಾಜನಗರ: ಮಹಿಳೆಯರ ಎದುರು ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ವ್ಯಕ್ತಿಯ ದುರ್ವರ್ತನೆ ಪ್ರಶ್ನಿಸಿದ್ದಕ್ಕೆ ಆತನ ಮಕ್ಕಳು ಜನರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರಿನಲ್ಲಿ ನಡೆದಿದೆ.

ಮೂರ್ತಿ ಎಂಬ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಎದುರು ಬಟ್ಟೆಬಿಚ್ಚಿ ನಿಂತುಕೊಂಡಿದ್ದ, ಮೂರ್ತಿಯ ಅಸಭ್ಯ ವರ್ತನೆಗೆ ಕೆಂಡಾಮಡಲರಾದ ಕಾಂತರಾಜು, ಮಣಿ, ಹಾಲಮ್ಮ ಎಂಬುವವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಆರೋಪಿ ಮೂರ್ತಿಗೆ ಮುಳ್ಳಿನ ಪೊರಕೆಯಿಂದ ಹೊಡೆದಿದ್ದಾರೆ.

ಶಾರೀರಿಕ ಸಂಬಂಧ ಬೆಳೆಸಲು ಹಿಂದೇಟು ಹಾಕ್ತಿದ್ದ ಪತ್ನಿ ಗುಟ್ಟು 2 ತಿಂಗಳ ನಂತ್ರ ಬಯಲಾಯ್ತು..!

ಈ ವೇಳೆ ಮೂರ್ತಿ ಮಕ್ಕಳಾದ ಮಹೇಂದ್ರ, ಸಂತೋಷ್, ಕಾಂತರಾಜು, ಮಣಿ ಹಾಗೂ ಹಾಲಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಕಾಂತರಾಜುವಿನ ಒಂದು ಕಣ್ಣು ಸಂಪೂರ್ಣ ಕುರುಡಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...