alex Certify SHOCKING: ಎಸ್​ಬಿಐ ಬ್ಯಾಂಕ್​ ಶಾಖೆಯಿಂದ 2.8 ಕೆಜಿ ಚಿನ್ನ ಕಳ್ಳತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಎಸ್​ಬಿಐ ಬ್ಯಾಂಕ್​ ಶಾಖೆಯಿಂದ 2.8 ಕೆಜಿ ಚಿನ್ನ ಕಳ್ಳತನ

ವೈಜನಾಥಪುರ ಪೊಲೀಸ್​ ಕ್ಯಾಂಪ್​ ಪ್ರದೇಶದಲ್ಲಿದ್ದ ಎಸ್​ಬಿಐ ಶಾಖೆಯಲ್ಲಿ ಇದೀಗ ಮತ್ತೊಂದು ಬ್ಯಾಂಕ್​​ ಕಳ್ಳತನದ ಪ್ರಕರಣದ ಕತೆ ಬೆಳಕಿಗೆ ಬಂದಿದೆ. ದರೋಡೆಕೋರರು 1.25 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ ತೂಕದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬ್ಯಾಂಕ್​ನ ಅಧಿಕಾರಿಗಳು ಬೈಜನಾಥಪುರ ಪೊಲೀಸ್​ ಕ್ಯಾಂಪ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್​ನ ಕ್ಲೀನರ್ ಉಮೇಶ್ ಮಲ್ಲಿಕ್​ ವಿರುದ್ಧ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಕಳ್ಳತನವಾದ ದಿನಾಂಕದಿಂದ ಅಂದರೆ ಏಪ್ರಿಲ್​ 23ರಿಂದ ಈತ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಈ ಪ್ರಕರಣ ಸಂಬಂಧ ಇಬ್ಬರು ಬ್ಯಾಂಕ್​ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇಬ್ಬರು ಸಿಬ್ಬಂದಿಯಲ್ಲಿ ಓರ್ವ ನಗದು – ಪ್ರಭಾರ ಹಾಗೂ ಮತ್ತೊಬ್ಬರು ಸೇವಾ ವ್ಯವಸ್ಥಾಪಕರಾಗಿದ್ದಾರೆ. ಬ್ಯಾಂಕ್​ನ ಒಳಗಿನ ಸೇಫ್​ ಕೀಲಿಗಳು ಈ ಇಬ್ಬರ ಬಳಿಯೇ ಇದ್ದುದರಿಂದ ಇವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಬ್ಯಾಂಕ್​ನ ತಿಜೋರಿಗಳನ್ನು ಪರಿಶೀಲನೆ ಮಾಡಿದಾಗ ಅಲ್ಲಿ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ. ತಪಾಸಣೆಯ ವೇಳೆಯಲ್ಲಿ ಬ್ಯಾಂಕ್​ ತಿಜೋರಿಯಲ್ಲಿ  ಚಿನ್ನ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಕಳ್ಳತನದ ಬಳಿಕ ಕ್ಲೀನರ್​ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ.

ವರದಿಗಳ ಆಧಾರದ ಮೇಲೆ ಬ್ಯಾಂಕ್‌ಗೆ ಸಾಮಾನ್ಯ ತಿಜೋರಿಯಲ್ಲಿ ತಪಾಸಣೆ ನಡೆಸಿದಾಗ ದರೋಡೆ ನಡೆದಿರುವುದು ತಿಳಿದು ಬಂದಿದೆ. ವಾಡಿಕೆಯ ತಪಾಸಣೆ ವೇಳೆ ತಿಜೋರಿಯಲ್ಲಿ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಕಳ್ಳತನದ ನಂತರ ಬ್ಯಾಂಕ್ ಕ್ಲೀನರ್ ಕರ್ತವ್ಯಕ್ಕೆ ಬರುವುದನ್ನು ನಿಲ್ಲಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...