alex Certify ವಿಚ್ಚೇದನ ಘೋಷಿಸಿದ ಬಳಿಕ ಮಾಜಿ ಮಾವ ನಾರ್ಗಾಜುನ ಸ್ಟುಡಿಯೋಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ಸಮಂತಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಚೇದನ ಘೋಷಿಸಿದ ಬಳಿಕ ಮಾಜಿ ಮಾವ ನಾರ್ಗಾಜುನ ಸ್ಟುಡಿಯೋಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ಸಮಂತಾ…!

ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಇದೇ ಮೊದಲ ಬಾರಿಗೆ ಸಮಂತಾಾ, ನಾಗಾರ್ಜುನರ ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ತನ್ನ ಮಾಜಿ ಮಾವ ನಾರ್ಗಾಜುನರ ಸ್ಟುಡಿಯೋಗೆ ನಟಿ ಸಮಂತಾ ಪ್ರಭು ಭೇಟಿ ನೀಡಿದ ವಿಚಾರ ಸಖತ್​ ಚರ್ಚೆಗೆ ಗ್ರಾಸವಾಗಿದೆ.

ಸಮಂತಾ ತಮ್ಮ ವೈವಾಹಿಕ ಸಂಬಂಧವನ್ನು ಅಂತ್ಯಗೊಳಿಸುತ್ತಿರೋದ್ರ ಬಗ್ಗೆ ಅಕ್ಟೋಬರ್​ 2ರಂದು ಘೋಷಣೆ ಮಾಡಿದ್ದರು. ನಾಗಚೈತನ್ಯ ಹಾಗೂ ಸಮಂತಾ ತಾವು ವಿಚ್ಛೇದನ ಪಡೆಯುತ್ತಿರೋದರ ಹಿಂದಿನ ಕಾರಣವನ್ನು ಈವರೆಗೂ ಬಹಿರಂಗಪಡಿಸಿಲ್ಲ.

ಸಮಂತಾ ಹಾಗೂ ನಾಗಚೈತನ್ಯ ನಾಲ್ಕು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಶುಕ್ರವಾರದಂದು ಸಮಂತಾ, ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಸಮಂತಾ ಏಕೆ ತಮ್ಮ ಮಾಜಿ ಪತಿಯ ತಂದೆಯ ಸ್ಟುಡಿಯೋಗೆ ತೆರಳಿದ್ರು ಎಂಬ ಚರ್ಚೆ ಜೋರಾಗಿಯೇ ನಡೆದಿದೆ. ಆದರೆ ಮೂಲಗಳ ಪ್ರಕಾರ ಸಮಂತಾ ನಿರ್ದೇಶಕ ಗುಣಶೇಖರ್​ ಅವರ ಶಾಕುಂತಲಂ ಸಿನಿಮಾ ಡಬ್ಬಿಂಗ್​​ಗಾಗಿ ಸ್ಟುಡಿಯೋಗೆ ತೆರಳಿದ್ದರು ಎನ್ನಲಾಗಿದೆ.

ಸಮಂತಾ ಹಾಗೂ ನಾಗಚೈತನ್ಯ ಮೂರು ವರ್ಷಗಳಿಂದ ಡೇಂಟಿಗ್​ ಮಾಡಿ 2017ರಲ್ಲಿ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಯ ವಿಚ್ಚೇದನದ ವಾರ್ತೆ ಅಭಿಮಾನಿಗಳಿಗೆ ದೊಡ್ಡ ಶಾಕ್​ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...