alex Certify ಪ್ರಿಯಕರನೊಂದಿಗೆ ಪರಾರಿಯಾದ ಪುತ್ರಿ ವಾಟ್ಸಾಪ್ ನಲ್ಲಿ ಕಳಿಸಿದ ಫೋಟೋ ನೋಡಿ ಪೋಷಕರಿಂದ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನೊಂದಿಗೆ ಪರಾರಿಯಾದ ಪುತ್ರಿ ವಾಟ್ಸಾಪ್ ನಲ್ಲಿ ಕಳಿಸಿದ ಫೋಟೋ ನೋಡಿ ಪೋಷಕರಿಂದ ದುಡುಕಿನ ನಿರ್ಧಾರ

ರಾಮನಗರ: ಮಗಳು ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರಿಂದ ಮನನೊಂದ ಪೋಷಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಚನ್ನಪಟ್ಟಣ ತಾಲ್ಲೂಕಿನ ತೆಂಕನಹಳ್ಳಿಯ ನಿವಾಸಿಯಾಗಿರುವ ದಂಪತಿ ತಮ್ಮ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೆಚ್. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮತ್ತು ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.

ಅವರ ಪುತ್ರಿ ಅದೇ ಗ್ರಾಮದ ಆಟೋ ಚಾಲಕನನ್ನು ಪ್ರೀತಿಸಿದ್ದು, ಪೋಷಕರಿಗೆ ವಿಷಯ ತಿಳಿದು ಪಂಚಾಯಿತಿ ನಡೆಸಿದ್ದರು. ಆದರೆ, ಮಗಳು ಪ್ರಿಯಕರನೊಂದಿಗೆ ಹೋಗಿ ಮದುವೆಯಾಗಿರುವುದಾಗಿ ವಾಟ್ಸಾಪ್ ನಲ್ಲಿ ಪೋಷಕರಿಗೆ ಫೋಟೋ ಕಳುಹಿಸಿದ್ದಾಳೆ. ಇದನ್ನು ಕಂಡು ಮನನೊಂದ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...