alex Certify ತಾಯಿ ನಿಧನರಾದ್ರೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಿಕಾ ವಿತರಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ನಿಧನರಾದ್ರೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಿಕಾ ವಿತರಕ

ಹಾವೇರಿ: ತಾಯಿ ಮೃತಪಟ್ಟಿದ್ದರೂ ಪತ್ರಿಕಾ ವಿತರಕರೊಬ್ಬರು ಮನೆಮನೆಗೆ ನ್ಯೂಸ್ ಪೇಪರ್ ತಲುಪಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

ಹಾವೇರಿಯ ಸಂಜಯ ಮಲ್ಲಪ್ಪ ಏಳುಕೊಳದ ಅವರು ರಾಜ್ಯಮಟ್ಟ ಮತ್ತು ಸ್ಥಳೀಯ, ಪ್ರಾದೇಶಿಕ ದಿನಪತ್ರಿಕೆಗಳನ್ನು ಮನೆ ಮನೆಗೆ ಹಾಕುತ್ತಾರೆ. ಅವರ ತಾಯಿ ಶಾಂತವ್ವ ಏಳುಕೊಳದ ಅವರು ಬೆಳಗಿನ ಜಾವ 4 ಗಂಟೆ ವೇಳೆಗೆ ನಿಧನರಾಗಿದ್ದಾರೆ.

ತಾಯಿ ನಿಧನರಾದರೂ ಪತ್ರಿಕೆ ಓದುಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಂಜಯ ಸರಿಯಾದ ಸಮಯಕ್ಕೆ ಕೆಲಸಕ್ಕೆ ತೆರಳಿದ್ದಾರೆ. ರಾಜ್ಯ ಮತ್ತು ಸ್ಥಳೀಯ ಪತ್ರಿಕೆ, ಪ್ರಾದೇಶಿಕ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಿದ್ದಾರೆ. ಇವತ್ತು ಪತ್ರಿಕೆ ಹಾಕುವುದು ಬೇಡ, ಮನೆಗೆ ಹೋಗಿ ತಾಯಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಪತ್ರಿಕೆ ಸಂಪಾದಕರು, ವಿತರಕರು ತಿಳಿಸಿದ್ದಾರೆ.

ಆದರೂ. ಸಂಜಯ ಓದುಗರಿಗೆ ತೊಂದರೆಯಾಗದಿರಲೆಂದು ಬಸವೇಶ್ವರ ನಗರ, ವಿದ್ಯಾನಗರದ ತಮ್ಮ ರೂಟ್ ನಲ್ಲಿ ಚಂದಾದಾರರ ಮನೆಗಳಿಗೆ ಪತ್ರಿಕೆ ತಲುಪಿಸಿದ ನಂತರ ಮನೆಗೆ ತೆರಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...