alex Certify ಹೇಳದೆ ಕೇಳದೆ ಮದುವೆಯಾದ ಪ್ರಿಯಕರ, ಪೊಲೀಸ್ ವಿಚಾರಣೆಯಲ್ಲಿ ಪ್ರಾಂಶುಪಾಲೆಯಿಂದ ಆಘಾತಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಳದೆ ಕೇಳದೆ ಮದುವೆಯಾದ ಪ್ರಿಯಕರ, ಪೊಲೀಸ್ ವಿಚಾರಣೆಯಲ್ಲಿ ಪ್ರಾಂಶುಪಾಲೆಯಿಂದ ಆಘಾತಕಾರಿ ಮಾಹಿತಿ

ಕೋಲಾರ: ಹೇಳದೇ ಕೇಳದೇ ಪ್ರಿಯಕರ ಮದುವೆಯಾಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ಜಬೀರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಈತನ ಪ್ರಿಯತಮೆ ಕೊಲೆ ಮಾಡಿಸಿದ ಆರೋಪ ಕೇಳಿಬಂದಿದೆ.

ಜಬೀರ್ ದೂರದ ಸಂಬಂಧಿಯಾಗಿರುವ ಪ್ರಾಂಶುಪಾಲೆಯೊಂದಿಗೆ ಸಲುಗೆಯಿಂದ ಇದ್ದ. ಆದರೆ, ಆಕೆಗೆ ತಿಳಿಯದಂತೆ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದ. ಇದರಿಂದ ಆತನ ಕೊಲೆಗೆ ಸಂಚು ರೂಪಿಸಿದ ಪ್ರಾಂಶುಪಾಲೆ ತನಗೆ ಬರಬೇಕಿರುವ ಹಣ ಪಡೆದುಕೊಂಡು ಬರುವಂತೆ ಜಬೀರ್ ನನ್ನು ಹೈದರಾಬಾದ್ ಗೆ ಕಳುಹಿಸಿದ್ದಾಳೆ.

ಮದುವೆಯಾಗಿ ಒಂದು ತಿಂಗಳ ನಂತರದಲ್ಲಿ ಹೈದರಾಬಾದ್ ಗೆ ಹೋಗಿದ್ದ ಜಬೀರ್ 22 ದಿನಗಳಿಂದ ನಾಪತ್ತೆಯಾಗಿದ್ದರಿಂದ ಗಲ್ ಪೇಟೆ ಪೊಲೀಸ್ ಠಾಣೆಗೆ ಆತನ ಪೋಷಕರು ದೂರು ನೀಡಿದ್ದಾರೆ. ಕಾಲ್ ಡೀಟೇಲ್ಸ್ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಮೇ 4 ರಂದು ಆತನೊಂದಿಗೆ ಪ್ರಾಂಶುಪಾಲೆ ಮಾತನಾಡಿರುವುದು ಗೊತ್ತಾಗಿದೆ.

ಆಕೆಯ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಕಾಫಿಯಲ್ಲಿ ನಿದ್ದೆ ಮಾತ್ರೆ ಹಾಕಿ ಜಬೀರ್ ಪ್ರಜ್ಞೆತಪ್ಪಿದ ನಂತರ ಕೊಲೆ ಮಾಡಿದ್ದಾರೆ. ಬೀದರ್ ನಿಡುವಂಚಿ ಬಳಿ ಮೃತದೇಹ ಹೂತುಹಾಕಿರುವ ಬಗ್ಗೆ ಪ್ರಾಂಶುಪಾಲೆ ಹೇಳಿಕೊಂಡಿದ್ದಾಳೆ. ಪ್ರಾಂಶುಪಾಲೆ ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಉಳಿದಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...