alex Certify ನಿರ್ಲಕ್ಷಿಸಿದಳೆಂಬ ಕಾರಣಕ್ಕೆ ಪ್ರಿಯತಮೆಯನ್ನೇ ಹತ್ಯೆಗೈದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಲಕ್ಷಿಸಿದಳೆಂಬ ಕಾರಣಕ್ಕೆ ಪ್ರಿಯತಮೆಯನ್ನೇ ಹತ್ಯೆಗೈದ ಪಾಪಿ

ತನ್ನನ್ನು ಕಡೆಗಣಿಸಿದರು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿದ ಪ್ರಸಂಗವೊಂದು ದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ.

ಕೃಷ್ಣ ಎಂಬಾತ ಮೋನಿಕಾ ಶರ್ಮಾಳನ್ನು ಪ್ರೀತಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ಆತನನ್ನು ಆಕೆ ನಿರ್ಲಕ್ಷಿಸಲು ಪ್ರಾರಂಭಿಸಿದ್ದಳು. ಕೋಪಗೊಂಡ ಪ್ರಿಯತಮ ಮಹಿಳೆಯನ್ನು ಗಂಟಲಿನಿಂದ ಚಾಕುವಿನಿಂದ ಕತ್ತರಿಸಿ ಕೊಲೆ ಮಾಡಿದ.

ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಬಾಲೆಯ ಅದ್ಬುತ ಸಾಧನೆ

ಕೊಲೆ ಬಗ್ಗೆ ದೆಹಲಿ ಪೊಲೀಸರಿಗೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕೆ ತಲುಪಿದಾಗ ಮೋನಿಕಾ ಶರ್ಮಾ ರಕ್ತದ ಮಡುವಲ್ಲಿ ಬಿದ್ದಿರುವುದನ್ನು ಕಂಡರು. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಾಯಿಯನ್ನು ಭೇಟಿಯಾಗಲು ಆರೋಪಿಯು ಬರುತ್ತಿದ್ದ ಎಂದು ಸಂತ್ರಸ್ತೆಯ 17 ವರ್ಷದ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ. ಅಪರಾಧ ಎಸಗಿದ ನಂತರ ಕಟ್ಟಡದಿಂದ ಹೊರಬಂದ ಆರೋಪಿ ಸಿಸಿ ಟಿವಿಯಲ್ಲಿ ಕಾಣಿಸಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಆಕೆಯ ಪತಿ ಫೆಬ್ರವರಿ 2021ರಲ್ಲಿ ನಿಧನರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...