alex Certify ಪಬ್‌ ಮುಂದಿನ ಚರಂಡಿಯಲ್ಲಿ ವ್ಯಕ್ತಿಯ ಚಿತಾಭಸ್ಮ ವಿಸರ್ಜನೆ…! ಇದರ ಹಿಂದಿದೆ ವಿಚಿತ್ರ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಬ್‌ ಮುಂದಿನ ಚರಂಡಿಯಲ್ಲಿ ವ್ಯಕ್ತಿಯ ಚಿತಾಭಸ್ಮ ವಿಸರ್ಜನೆ…! ಇದರ ಹಿಂದಿದೆ ವಿಚಿತ್ರ ಕಾರಣ

ತಮ್ಮ ತಂದೆಯ ಕೊನೆಯ ಆಸೆಯಂತೆ ಕುಟುಂಬವೊಂದು ಆತನ ಚಿತಾಭಸ್ಮವನ್ನ ಅವರ ನೆಚ್ಚಿನ ಪಬ್​ನ ಎದುರಿದ್ದ ಚರಂಡಿಯಲ್ಲಿ ವಿಸರ್ಜಿಸಿದೆ. ತಾನು ಶಾಶ್ವತವಾಗಿ ನೆಚ್ಚಿನ ಪಬ್​ ಬಳಿಯಲ್ಲೇ ಇರಬೇಕು ಎಂದು ತಂದೆ ಆಸೆಪಟ್ಟಿದ್ದರಿಂದ ಅವರು ಹೇಳಿದಂತೆಯೇ ಕುಟುಂಬಸ್ಥರು ಚಿತಾಭಸ್ಮವನ್ನ ವಿಸರ್ಜಿಸಿದ್ದಾರೆ.

ಕೆವಿನ್​ ಎಂಬವರು ತಾವು ಸಾವಿಗೀಡಾಗುವ ಮುನ್ನ ಕುಟುಂಬಸ್ಥರ ಎದುರು ಇಂತಹದ್ದೊಂದು ವಿಚಿತ್ರ ಬೇಡಿಕೆಯನ್ನ ಇಟ್ಟಿದ್ದರು. ಪುತ್ರ ಓವೆನ್​ ಹಾಗೂ ಪುತ್ರಿ ಕ್ಯಾಸಿಡಿ ಬಳಿ ತಮ್ಮ ಕೊನೆಯ ಆಸೆಯನ್ನ ಹೇಳಿಕೊಂಡಿದ್ದ ಕೆವಿನ್​ 66ನೇ ವಯಸ್ಸಿಗೆ ನಿಧನರಾಗಿದ್ದರು.

ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….!

ಹೀಗಾಗಿ ಕೆವಿನ್​​ ಪುತ್ರ ಕೆವಿನ್​ರ ಆಸೆಯಂತೆಯೇ ಅವರ ಚಿತಾಭಸ್ಮವನ್ನ ಬಿಯರ್​ಗೆ ಪಾನೀಯದೊಂದಿಗೆ ಬೆರೆಸಿದ್ರು. ಅಲ್ಲದೇ ತಂದೆಯ ಅಂತಿಮ ಕಾರ್ಯ ಮಾಡುವ ಮುನ್ನ ಮಾತನಾಡಿದ ಓವೆನ್​, ನಿಮಗೆ ಇದು ತೀರಾ ವಿಚಿತ್ರ ಎಂದೆನಿಸಬಹುದು. ಆದರೆ ನನ್ನ ತಂದೆಯ ಕೊನೆ ಆಸೆ ಹೀಗೆ ಇತ್ತು. ಅವರು ಈ ಸ್ಥಳದಲ್ಲಿ ಶಾಶ್ವತವಾಗಿ ಇರಲು ಬಯಸಿದ್ದರು ಎಂದು ಹೇಳಿದ್ದಾರೆ. ಚಿತಾಭಸ್ಮ ತುಂಬಿದ್ದ ಬಿಯರ್​ನ್ನು ಓವೆನ್​ ಚರಂಡಿಯಲ್ಲಿ ಚೆಲ್ಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...