ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭಾನುವಾರ ರಂಜಾನ್ ಹಬ್ಬ ಆಚರಿಸುವುದಾಗಿ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಜಿಗಳಿಂದ ರಂಜಾನ್ ಆಚರಣೆ ಬಗ್ಗೆ ಘೋಷಣೆ ಮಾಡಲಾಗಿದೆ.
ಖಾಜಿಗಳಾದ ತ್ವಾಕ ಅಹ್ಮದ್ ಮುಸ್ಲಿಯಾರ್, ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರಿಂದ ರಂಜಾನ್ ಆಚರಣೆ ಮಾಡುವ ಕುರಿತಾಗಿ ಘೋಷಣೆ ಮಾಡಲಾಗಿದೆ. ಮೇ 25 ರಂದು ಸೋಮವಾರ ರಂಜಾನ್ ನಿಗದಿಯಾಗಿದ್ದು, ಮೇ 24 ರ ಭಾನುವಾರವೇ ರಂಜಾನ್ ಆಚರಣೆಗೆ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.
ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ.