alex Certify 15 ದಿನದಲ್ಲೇ ಗಂಡನ ತೊರೆದು ಬೇರೆ ಮದುವೆಯಾದ ಯುವತಿ: ತವರು ಮನೆಯವರಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ದಿನದಲ್ಲೇ ಗಂಡನ ತೊರೆದು ಬೇರೆ ಮದುವೆಯಾದ ಯುವತಿ: ತವರು ಮನೆಯವರಿಂದಲೇ ಘೋರ ಕೃತ್ಯ

ಬೆಂಗಳೂರು: ಮದುವೆಯಾದ 15 ದಿನಕ್ಕೆ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಮರು ಮದುವೆಯಾಗಿದ್ದ ಯುವತಿಯ ಮನೆಯವರು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾರೆ.

ಬೆಂಗಳೂರಿನ ಲಗ್ಗೆರೆಯಲ್ಲಿ 27 ವರ್ಷದ ಚೇತನ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಚೇತನ್ ಪತ್ನಿಯ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಹಾಗೂ ಚಿಕ್ಕಪ್ಪನ ಮಗ ದಿಲೀಪ್ ಕೊಲೆ ಮಾಡಿ ಪರಾರಿಯಾಗಿದ್ದಾರೆನ್ನಲಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಭೂಮಿಕಾ ಮತ್ತು ಹನುಮಂತನಗರದ ಚೇತನ್ ಪ್ರೀತಿಸಿದ್ದರು. ಇವರ ಮದುವೆಗೆ ಹುಡುಗಿ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ಬೆಸ್ಕಾಂ ಉದ್ಯೋಗಿಯೊಂದಿಗೆ ಭೂಮಿಕಾ ಮದುವೆ ಮಾಡಲಾಗಿದ್ದು, 15 ದಿನದಲ್ಲಿ ಗಂಡನ ಮನೆಯಿಂದ ಓಡಿ ಬಂದ ಆಕೆ ಪ್ರಿಯಕರನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಭೂಮಿಕಾ –ಚೇತನ್ ಮನೆಗೆ ಬಂದಿದ್ದ ಆರೋಪಿಗಳು ಭೂಮಿಕಾಳನ್ನು ಹೊರಗೆ ಕಳುಹಿಸಿ ಚೇತನ್ ನನ್ನು ಹತ್ಯೆಮಾಡಿದ್ದಾರೆ. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...