alex Certify ಗಮನಿಸಿ..! ಇವತ್ತು ಅನಗತ್ಯವಾಗಿ ಹೊರಬಂದ್ರೆ ವಾಹನ ಸೀಜ್, ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ‘ಮಾಹಿತಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಇವತ್ತು ಅನಗತ್ಯವಾಗಿ ಹೊರಬಂದ್ರೆ ವಾಹನ ಸೀಜ್, ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ‘ಮಾಹಿತಿ’

ಬೆಂಗಳೂರು: ಭಾನುವಾರ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದು ಅನಗತ್ಯವಾಗಿ ಹೊರಬಂದರೆ ವಾಹನ ಸೀಜ್ ಮಾಡಲಾಗುವುದು. ಅಲ್ಲದೇ ಕೇಸ್ ದಾಖಲಿಸಲಾಗುವುದು.

ತುರ್ತು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಶನಿವಾರ ಸಂಜೆ 7 ಗಂಟೆಗೆ ಎಲ್ಲಾ ಚಟುವಟಿಕೆಗಳು ಬಂದ್ ಆಗಿದ್ದು, ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧವಿದೆ.

ಹಾಲು, ತರಕಾರಿ, ಔಷಧ ಅಂಗಡಿ, ಹೋಟೆಲ್ ನಲ್ಲಿ ಪಾರ್ಸಲ್, ಮಾಂಸದಂಗಡಿ, ಆನ್ಲೈನ್ ತರಗತಿ, ಆಸ್ಪತ್ರೆ, ಕ್ಲಿನಿಕ್, ಆಂಬುಲೆನ್ಸ್, ಮಾಧ್ಯಮ, ಪೊಲೀಸ್ ಸೇವೆ ಇರುತ್ತದೆ.

ರೈಲ್, ಬಸ್, ಕ್ಯಾಬ್, ಆಟೋ ಸಂಚಾರ ಇರುವುದಿಲ್ಲ. ಮಧ್ಯದ ಅಂಗಡಿ, ಮೆಕಾನಿಕ್ ಶಾಪ್ ಗಳನ್ನು ಬಂದ್ ಮಾಡಲಾಗುವುದು. ಮಾಲ್, ಚಿತ್ರಮಂದಿರ ಇರುವುದಿಲ್ಲ. ವಾಣಿಜ್ಯ ಮಳಿಗೆಗಳು, ಪಾರ್ಕ್ ಗಳು, ರಸ್ತೆಗಳು ಬಂದ್ ಆಗಲಿವೆ. ತುರ್ತು ಅಗತ್ಯ ಕೆಲಸ ಹೊರತಾಗಿ ವಾಹನ ಬಳಸುವಂತಿಲ್ಲ. ಸಭೆ ಸಮಾರಂಭಗಳಿಗೆ ನಿರ್ಬಂಧವಿದ್ದು ನಿಗದಿಯಾದ ಮದುವೆಗಳಿಗೆ ಮಾತ್ರ ಅವಕಾಶ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...