alex Certify ಒಂದು ಕೈಯಲ್ಲಿ ತಾಳಿ, ಮತ್ತೊಂದು ಕೈಯಲ್ಲಿ ಚಾಕು ಹಿಡಿದು ಯುವತಿ ಬಳಿ ಬಂದ ಯುವಕನಿಂದ ಘೋರಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕೈಯಲ್ಲಿ ತಾಳಿ, ಮತ್ತೊಂದು ಕೈಯಲ್ಲಿ ಚಾಕು ಹಿಡಿದು ಯುವತಿ ಬಳಿ ಬಂದ ಯುವಕನಿಂದ ಘೋರಕೃತ್ಯ

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ರೌಡಿ ಶೀಟರ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಹೊಸಕೆರೆಹಳ್ಳಿ ದ್ವಾರಕಾ ನಗರದಲ್ಲಿ ಸೋಮವಾರ ರಾತ್ರಿ ಘಟನೆ

ಪ್ರಕಾಶ ನಗರದ 19 ವರ್ಷದ ಯುವತಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ನಂತರ ಆರೋಪಿ ರಾಜಾಜಿನಗರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ರೌಡಿಶೀಟರ್ ಪ್ರಕಾಶ್ ಗೌಡ ಯುವತಿಯನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದ. ಆದರೆ, ಆತನನ್ನು ವಿರೋಧಿಸದ ಯುವತಿ ಆತ ಸಿಕ್ಕಾಗೆಲ್ಲಾ ಮಾತನಾಡಿಸುತ್ತಿದ್ದಳು. ಇದನ್ನೇ ಪ್ರೀತಿ ಎಂದುಕೊಂಡಿದ್ದ ಆರೋಪಿ ಮದುವೆಯಾಗುವಂತೆ ಬಲವಂತ ಮಾಡಿದ್ದಾನೆ.

ಗಿರಿನಗರದ ದ್ವಾರಕಾ ನಗರದ ಬಳಿ ಸ್ನೇಹಿತನ ಮನೆಗೆ ಮಾತನಾಡಲು ಯುವತಿ ಕರೆಸಿಕೊಂಡಿದ್ದು ಒಂದು ಕೈಯಲ್ಲಿ ಚಾಕು ಮತ್ತೊಂದು ಕೈಯಲ್ಲಿ ತಾಳಿ ಹಿಡಿದು ಮದುವೆಯಾಗುವಂತೆ ಬೆದರಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದಾಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...