alex Certify BIG NEWS: ಲಾಕ್ ​ಡೌನ್​ ‘ಪ್ಯಾಕೇಜ್’​ ಕುರಿತು ಸಚಿವ ಆರ್​. ಅಶೋಕ್​ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ​ಡೌನ್​ ‘ಪ್ಯಾಕೇಜ್’​ ಕುರಿತು ಸಚಿವ ಆರ್​. ಅಶೋಕ್​ ಮಹತ್ವದ ಮಾಹಿತಿ

ರಾಜ್ಯದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನ ನೋಡುತ್ತಿದ್ದರೆ ಲಾಕ್​ಡೌನ್​ ಮುಂದುವರಿಸೋದೇ ಸೂಕ್ತ ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದ್ದಾರೆ. ಉತ್ತರ ಕನ್ನಡದ ಭಟ್ಕಳದಲ್ಲಿ ತೌಕ್ತೆ ಚಂಡಮಾರುತದಿಂದಾದ ಹಾನಿ ವೀಕ್ಷಣೆಗೆ ತೆರಳಿದ್ದ ವೇಳೆ ಅಶೋಕ್​ ಈ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಎರಡನೆ ಹಂತದ ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್​ ಘೋಷಣೆಯಾಗಲಿದೆ. ಸದ್ಯದ ಪರಿಸ್ಥಿತಿಯನ್ನ ಗಮನದಲ್ಲಿರಿಸಿಕೊಂಡು ಸಿಎಂ ಯಡಿಯೂರಪ್ಪ ಪ್ಯಾಕೇಜ್​ ಘೋಷಿಸಲಿದ್ದಾರೆ ಎಂದು ಹೇಳಿದ್ರು.

ಹಳ್ಳಿಗಳಿಗೆ ಕೊರೊನಾ ಸೋಂಕು ವ್ಯಾಪಿಸಿರೋದ್ರ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್​. ಅಶೋಕ್​, ಪ್ರತಿ ಹಳ್ಳಿಗಳಿಗೂ ವಿಶೇಷ ತಂಡವನ್ನ ಕಳುಹಿಸಿ ಸೋಂಕು ತಡೆಯಲು ಪ್ರಯತ್ನ ಮಾಡಲಾಗುವುದು. ಹಳ್ಳಿಗಳಲ್ಲಿ ಟೆಸ್ಟಿಂಗ್​ ಪ್ರಮಾಣ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡ್ತೇವೆ ಎಂದು ಹೇಳಿದ್ರು.

ಇನ್ನು ಇದೇ ವೇಳೆ ಕೊರೊನಾ ಮೂರನೆ ಅಲೆಯ ವಿಚಾರವಾಗಿಯೂ ಮಾತನಾಡಿದ ಆರ್​. ಅಶೋಕ್​, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಸೋಂಕಿನ ಪರಿಣಾಮ ಜಾಸ್ತಿ ಇರೋದ್ರಿಂದ, ಹೆಚ್ಚೆಚ್ಚು ಮಕ್ಕಳ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದೇವೆ. ಕೊರೊನಾ ಮೂರನೆ ಅಲೆಯನ್ನ ತಡೆಯಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ವಿರೋಧ ಪಕ್ಷದ ಮಾತುಗಳಿಗೆ ಕಿವಿಗೊಡೋದಿಲ್ಲ. ಕಾಂಗ್ರೆಸ್​ನವರು ನೂರು ಕೋಟಿ ಕೊಡುತ್ತೇನೆ ಅಂತಿದ್ದಾರೆ. ಅದು ಶಾಸಕರ ಅನುದಾನದ ಹಣ. ಅವರು ಪಕ್ಷದ ವತಿಯಿಂದ ಹಣ ನೀಡುತ್ತಿಲ್ಲ. ಸರ್ಕಾರದ ಹಣವನ್ನ ಸರ್ಕಾರಕ್ಕೇ ಕೊಟ್ಟರೆ ಅದರಿಂದ ಏನು ಪ್ರಯೋಜನ..? ಎಂದು ಪ್ರಶ್ನೆ ಮಾಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...