alex Certify ಅಸಾಧ್ಯವಾಗಿದ್ದ ʼಕೊರೊನಾʼ 2ನೇ ಅಲೆ ಕಾಲಿಟ್ಟಿದ್ದೇಗೆ…? ಸಂಪೂರ್ಣ ಮಾಹಿತಿ ನೀಡಿದ್ದಾರೆ ಡಾ. ರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಾಧ್ಯವಾಗಿದ್ದ ʼಕೊರೊನಾʼ 2ನೇ ಅಲೆ ಕಾಲಿಟ್ಟಿದ್ದೇಗೆ…? ಸಂಪೂರ್ಣ ಮಾಹಿತಿ ನೀಡಿದ್ದಾರೆ ಡಾ. ರಾಜು

ದೇಶಕ್ಕೆ ಕೊರೊನಾ ಕಾಲಿಟ್ಟ ಸಂದರ್ಭದಲ್ಲಿ ಆತಂಕಗೊಂಡಿದ್ದ ಜನತೆಗೆ ಡಾ. ರಾಜು ಅವರು ಈ ಕುರಿತು ಬಿಡುಗಡೆ ಮಾಡುತ್ತಿದ್ದ ವಿಡಿಯೋಗಳು ಸಾಂತ್ವನ ನೀಡುತ್ತಿದ್ದವು. ಅತ್ಯಂತ ಸರಳ ರೀತಿಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಡಾ. ರಾಜು ಈ ವಿಡಿಯೋಗಳಲ್ಲಿ ಇಂಚಿಂಚೂ ಮಾಹಿತಿ ನೀಡಿದ್ದರು.

ಇದೀಗ ದೇಶದಲ್ಲಿ ಕೊರೊನಾ ಇಳಿಮುಖವಾಗಿದೆ ನಿಜ. ಆದರೆ ಇದೇ ಸಂದರ್ಭದಲ್ಲಿ ಎರಡನೇ ಅಲೆ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸ್ವತಃ ಡಾ. ರಾಜು ಅವರೂ ಸಹ ಈ ಮಾತನ್ನು ಪುಷ್ಟೀಕರಿಸಿದ್ದಾರೆ. ಕೊರೊನಾ ಅಲೆ ಭಾರತಕ್ಕೆ ಕಾಲಿಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದ ಡಾ. ರಾಜು, ಇಷ್ಟಾದರೂ ಎರಡನೇ ಅಲೆ ಬಂದಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ.

ಜೊತೆಗೆ ಕೊರೊನಾಗಿಂತ ಭಯದಿಂದಲೇ ಜನತೆ ಸಾವನ್ನಪ್ಪುತ್ತಿದ್ದಾರೆ ಎಂಬ ತಮ್ಮ ಈ ಹಿಂದಿನ ಮಾತುಗಳನ್ನು ಡಾ. ರಾಜು ಈ ವಿಡಿಯೋದಲ್ಲಿ ಪುನರುಚ್ಚರಿಸಿದ್ದು, ಯಾವುದೇ ಕಾರಣಕ್ಕೂ ಭಯಬೀಳಬೇಡಿ ಎಂದು ಧೈರ್ಯ ತುಂಬಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲ. ಹತ್ತು ಅಲೆ ಬಂದರೂ ಅದನ್ನು ಧೈರ್ಯದಿಂದ ಎದುರಿಸಿ ಎಂದು ಡಾ. ರಾಜು ಅವರು ಸಲಹೆ ನೀಡಿದ್ದು, ಈ ವಿಡಿಯೋ ನೋಡಿ ನೀವೂ ನಿಮ್ಮ ಅಭಿಪ್ರಾಯ ತಿಳಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...