alex Certify BIG NEWS: ಮಹಾನಾಯಕ ಕುಮಾರಸ್ವಾಮಿಯೇ ಇರಬೇಕು; ಮೊದಲು ಎಸ್ಐಟಿ ಅವರ ಹೇಳಿಕೆ ಪಡೆಯಲಿ ಎಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಾನಾಯಕ ಕುಮಾರಸ್ವಾಮಿಯೇ ಇರಬೇಕು; ಮೊದಲು ಎಸ್ಐಟಿ ಅವರ ಹೇಳಿಕೆ ಪಡೆಯಲಿ ಎಂದ ಶಾಸಕ

ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ಮಹಾನಾಯಕನ ವಿಚಾರ ಈವರೆಗೆ ಡಿ.ಕೆ. ಶಿವಕುಮಾರ್ ಸುತ್ತ ತಿರುಗುತ್ತಿತ್ತು. ಇದೀಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸುತ್ತವೇ ಗಿರಕಿಹೊಡೆಯಲು ಆರಂಭಿಸಿದಂತಿದೆ. ಸಿಡಿ ಹಿಂದಿನ ಮಹಾನಾಯಕ ಹೆಚ್.ಡಿ. ಕುಮಾರಸ್ವಾಮಿಯವರೇ ಇರಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಿಡಿ ವಿಚಾರವಾಗಿ ಕುಮಾರಸ್ವಾಮಿಗೆ ಗೊತ್ತಿದೆ ಎಂದ ಮೇಲೆ ಎಸ್ಐಟಿ ಮೊದಲು ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಿ ಎಂದರು.

ಸಿಡಿ ಪ್ರಕರಣ; ಪತ್ರಕರ್ತನ ವಿಡಿಯೋ ಮೂಲ ಪತ್ತೆ ಹಚ್ಚಿದ ಎಸ್ಐಟಿ

ಆ ಮಹಾನಾಯಕ ಯಾರು ಬೇಕಾದರೂ ಆಗಿರಬಹುದು. ಆರ್. ಅಶೋಕ್, ವಿಜಯೇಂದ್ರ ಅಥವಾ ಕುಮಾರಸ್ವಾಮಿ. ಹೀಗೆ ಯಾರು ಬೇಕಾದಾರೂ ಆಗಿರಬಹುದು. ಕುಮಾರಸ್ವಾಮಿಯವರಿಗೆ ಎಲ್ಲವೂ ಗೊತ್ತು ಎನ್ನಲಾಗುತ್ತಿದೆ. ಹಾಗಿದ್ದ ಮೇಲೆ ಎಸ್ಐಟಿ ಮೊದಲು ಕುಮಾರಸ್ವಾಮಿ ಹೇಳಿಕೆ ಪಡೆದು ವಿಚಾರಿಸಲಿ. ಸತ್ಯ ಹೊರಬರಲು ಸಹಕರಿಸಲಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...