alex Certify BIG NEWS: ಮತ್ತೆ ನಾಲಿಗೆ ಹರಿಬಿಟ್ಟ ಆಹಾರ ಸಚಿವ; ಸಾಯುವವರಿಗೆ ಏನ್ ಮಾಡಲು ಆಗುತ್ತೆ, ನಾವಂತು ಬದುಕಬೇಕು ಎಂದ ಉಮೇಶ್ ಕತ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೆ ನಾಲಿಗೆ ಹರಿಬಿಟ್ಟ ಆಹಾರ ಸಚಿವ; ಸಾಯುವವರಿಗೆ ಏನ್ ಮಾಡಲು ಆಗುತ್ತೆ, ನಾವಂತು ಬದುಕಬೇಕು ಎಂದ ಉಮೇಶ್ ಕತ್ತಿ

ಬಾಗಲಕೋಟೆ: ಇತ್ತೀಚೆಗಷ್ಟೇ ಪಡಿತರ ಅಕ್ಕಿ ಕೇಳಿದ ವ್ಯಕ್ತಿಯೊಬ್ಬರಿಗೆ ಸಾಯುವಂತೆ ಹೇಳಿ ವಿವಾದಕ್ಕೀಡಾಗಿದ್ದ ಆಹಾರ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಅಂತದ್ದೇ ಉಡಾಫೆ ಮಾತುಗಳನ್ನಾಡುವ ಮೂಲಕ ನಾಲಿಗೆ ಹರಿಬಿಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಉಮೇಶ್ ಕತ್ತಿ ಅಧಿಕಾರಿಗಳ ಸಭೆಯಲ್ಲಿ, ಕೋವಿಡ್ ನಿಂದ ಹಲವರು ಸಾಯುತ್ತಿದ್ದಾರೆ. ರೆಮ್ ಡಿಸಿವಿರ್ ಕೊಟ್ಟರೂ ಜನ ಸಾಯುತ್ತಾರೆ ಅದಕ್ಕೆ ಏನು ಮಾಡಲು ಸಾಧ್ಯ? ಅವರಿಗೆ ಹಾರ್ಟ್ ಸಮಸ್ಯೆ, ಶುಗರ್ ಇರುತ್ತೆ. ಧೈರ್ಯ ಇಲ್ಲದವರು ಸಾಯುತ್ತಾರೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಮೋದಿ ಮತ್ತೊಂದು ಕ್ರಮ: ಸಿಎಂ ಯಡಿಯೂರಪ್ಪ ಸೇರಿ ನಾಲ್ವರು ಮುಖ್ಯಮಂತ್ರಿಗಳಿಗೆ ಕರೆ

ಅಲ್ಲದೇ ಸಾಯುವವರು ಏಕೆ ಸತ್ತರೆಂದು ಹೇಳಲಾಗದು. ನೀವು ಉಳಿಯುತ್ತೀರೋ ಬಿಡ್ತಿರೋ ಆದರೆ ನಾವಂತು ಉಳಿಯಬೇಕು. ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದೆ ಯಾರ್ಯಾರು ಯಾಕೆ ಸಾಯುತ್ತಿದ್ದಾರೆ ಎಂದು ಹೇಳಲಾಗುತ್ತಾ? ಎಂದು ಬೇಜವಾಬ್ದಾರಿಯೀದ ಅಪಹಾಸ್ಯ ಮಾಡಿ ನಕ್ಕಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಆಹಾರ ಸಚಿವರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಜ್ಯ ಕೋವಿಡ್ ನಿಂದ ಗಂಭೀರ ಸ್ಥಿತಿ ಎದುರಿಸುತ್ತಿದೆ. ಆದರೆ ಬೇಜವಾಬ್ದಾರಿತನದಲ್ಲಿ ಬಿಜೆಪಿಯ ಇಡೀ ಸಚಿವ ಸಂಪುಟ ಕಾಲ ಕಳೆಯುತ್ತಿದೆ. ಇದು ತಮಾಷೆಯ ಸಂದರ್ಭವೇ? ಎಂದು ಪ್ರಶ್ನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...