alex Certify BIG NEWS: ದೆಹಲಿಗೆ ಹೋದಾಕ್ಷಣ ಸಿಎಂ ಬದಲಾವಣೆಯಾಗೋದಾದ್ರೆ ರಾಜ್ಯದಲ್ಲಿ ದಿನಕ್ಕೊಬ್ಬರು ಮುಖ್ಯಮಂತ್ರಿಯಾಗ್ತಾರೆ ಎಂದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೆಹಲಿಗೆ ಹೋದಾಕ್ಷಣ ಸಿಎಂ ಬದಲಾವಣೆಯಾಗೋದಾದ್ರೆ ರಾಜ್ಯದಲ್ಲಿ ದಿನಕ್ಕೊಬ್ಬರು ಮುಖ್ಯಮಂತ್ರಿಯಾಗ್ತಾರೆ ಎಂದ ಸಚಿವ

ಯಾದಗಿರಿ: ಯಾರೋ ದೆಹಲಿಗೆ ಹೋದಾಕ್ಷಣ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತೆ ಎನ್ನುವುದಾದರೆ ರಾಜ್ಯದಲ್ಲಿ ದಿನಕ್ಕೊಬ್ಬರು ಸಿಎಂ ಆಗ್ತಾರೆ ಎಂದು ಸಚಿವ ಆರ್. ಶಂಕರ್ ಹೇಳಿದ್ದಾರೆ.

ಕ್ಷೇತ್ರಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಗಮನ ಹರಿಸಿ; ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ; ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಖಡಕ್ ಸೂಚನೆ

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹಾಗೆಲ್ಲ ದೆಹಲಿಗೆ ಹೋದ ತಕ್ಷಣ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎನ್ನುವುದಾದರೆ ದಿನಕ್ಕೊಬ್ಬರು ಸಿಎಂ ಆಗುತ್ತಾರೆ. ಅನಗತ್ಯ ಗೊಂದಲ ಬೇಡ ಇನ್ನೂ 2 ವರ್ಷಗಳ ಕಾಲ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ ಎಂದರು.

ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ ಬಳಕೆಯಿಂದ ಬರುತ್ತಾ ಬ್ಲಾಕ್ ಫಂಗಸ್….?

ರಾಜ್ಯದಲ್ಲಿರುವುದು ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ ಎಂಬ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಂಕರ್, ರಾಜ್ಯದಲ್ಲಿ 3 ಪಕ್ಷದ ಸರ್ಕಾರವೂ ಇಲ್ಲ. 36 ಗುಂಪುಗಳೂ ಇಲ್ಲ. ಇರುವುದೊಂದೇ ಬಿಜೆಪಿ ಸರ್ಕಾರ, ಬಿಜೆಪಿ ಎಂಬ ಒಂದೇ ಗುಂಪು. ಇದರಲ್ಲಿ ಯಾರಿಗೂ ಗೊಂದಲಗಳಿಲ್ಲ. ನಾನೂ ಕಳೆದ ಕೆಲ ತಿಂಗಳಿಂದ ಸಚಿವ ಸ್ಥಾನದಲ್ಲಿದ್ದೇನೆ ನಮ್ಮ ಇಲಾಖೆಯಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡಿಲ್ಲ. ಆಯಾ ಸಚಿವರ ಇಲಾಖೆಯನ್ನು ಅವರವರು ಜವಾಬ್ದಾರಿಯಿಂದಲೇ ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಅನಗತ್ಯ ಹೇಳಿಕೆಗಳು ಯಾಕೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...