alex Certify ಅಗ್ನಿಗೆ ಆಹುತಿಯಾದ ವಾಹನಗಳ ತೆರವುಗೊಳಿಸಲು ಪೊಲೀಸರ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ನಿಗೆ ಆಹುತಿಯಾದ ವಾಹನಗಳ ತೆರವುಗೊಳಿಸಲು ಪೊಲೀಸರ ಸೂಚನೆ

ಕಳೆದ ವರ್ಷ ಯಲಹಂಕದಲ್ಲಿ ಏರೋ ಇಂಡಿಯಾ ಶೋ ವೇಳೆ ಯಲಹಂಕ ಏರ್​ಬೇಸ್​ ಪಾರ್ಕಿಂಗ್​ ಸ್ಥಳದಲ್ಲಿ ಅಗ್ನಿ ಅನಾಹುತ ಸಂಭವಿಸಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಬೆಂಕಿ ಅನಾಹುತದಲ್ಲಿ 300ಕ್ಕೂ ಹೆಚ್ಚು ವಾಹನಗಳು ಅಗ್ನಿಗೆ ಆಹುತಿಯಾಗಿದ್ವು. ಇದೀಗ ಮುಂದಿನ ವರ್ಷದ ಏರ್​ ಇಂಡಿಯಾ ಶೋಗೆ ಸಿದ್ಧತೆ ನಡೀತಿದೆ.

ಹೀಗಾಗಿ​ ವಾಹನ ಮಾಲೀಕರು ಹಾಗೂ ಇನ್ಶುರೆನ್ಸ್ ಕಂಪನಿಗಳಿಗೆ ಪಾರ್ಕಿಂಗ್ ನಲ್ಲಿ ಇನ್ನೂ ನಿಂತಿರೋ ಗುಜರಿ ವಾಹನಗಳನ್ನ ತೆರವುಗೊಳಿಸಿ ಅಂತಾ ಯಲಹಂಕ ಪೊಲೀಸರು ನೋಟಿಸ್​ ನೀಡಿದ್ದಾರೆ .

ಕಳೆದ ವರ್ಷ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 300ಕ್ಕೂ ಹೆಚ್ಚು ವಾಹನ ಸುಟ್ಟು ಕರಕಲಾಗಿತ್ತು. ಇದರಲ್ಲಿ ಸುಮಾರು 250 ವಾಹನಗಳನ್ನ ಮಾಲೀಕರು ವಾಪಸ್​ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇನ್ನೂ 75 ವಾಹನಗಳು ಏರ್​ಬೇಸ್​ ಪಾರ್ಕಿಂಗ್ ಸ್ಥಳದಲ್ಲೇ ನಿಂತಿದೆ.

ಈ ವಾಹನಗಳ ಮಾಲೀಕರು ಹಾಗೂ ಇನ್ಶುರೆನ್ಸ್ ಕಂಪನಿಗಳಿಗೆ ಪೊಲೀಸರು ನೋಟಿಸ್​ ನೀಡುವ ಮೂಲಕ ವಾಹನ ತೆರವು ಮಾಡಿ ಅಂತಾ ಸೂಚನೆ ಕೊಟ್ಟಿದ್ದಾರೆ. ಫೆಬ್ರವರಿ 2021ರಂದು ಏರೋ ಇಂಡಿಯಾ ಶೋ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...