ಶಿವಮೊಗ್ಗ: ಕೆರೆಯಲ್ಲಿ ಸಾಕಿದ ಸಾವಿರಾರು ಮೀನುಗಳು ಸತ್ತು ತೀವ್ರ ಸಂಕಷ್ಟಕ್ಕೆ ಒಳಗಾದ ಸುರೇಶ್ ಎಂಬುವರು ಸಹಾಯಧನಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
ವಿದ್ಯಾನಗರದ ಮೀನುಗಾರರಾದ ಸುರೇಶ್ ಎಂಬುವರು, ಹರಾಜು ಮೂಲಕ ಶಿವಮೊಗ್ಗ ಹಾರನಹಳ್ಳಿಯ ಹಿರೇಕೆರೆಯನ್ನು ಪಡೆದುಕೊಂಡಿದ್ದರು. ಅಲ್ಲಿ ಲಕ್ಷಾಂತರ ಮೀನುಗಳನ್ನು ಬಿಟ್ಟು ಸಾಕಿದ್ದರು.
ಇನ್ನೇನು ಮೀನುಗಳನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಈ ಕೊರೋನಾ ಕಾಯಿಲೆ ಸ್ವರೂಪ ಹೆಚ್ಚಾಗಿ ಲಾಕ್ ಡೌನ್ ಆಯಿತು. ಲಾಕ್ಡೌನ್ ಆದ ಕಾರಣ ಮೀನುಗಳ ಮಾರಾಟ ಆಗಲೇ ಇಲ್ಲ.
ಇದರ ನಡುವೆ ಆಮ್ಲಜನಕದ ಕೊರತೆಯೋ ನೀರಿನ ಪ್ರಮಾಣ ಕಡಿಮೆಯಾಗಿತ್ತೋ ಗೊತ್ತಿಲ್ಲ. ಕಳೆದ 15 ದಿನಗಳಿಂದ ಲಕ್ಷಾಂತರ ಮೀನುಗಳು ಮರಣಹೊಂದಿವೆ. ಇದರಿಂದ ಲಕ್ಷಾಂತರ ರೂಪಾಯಿ ಕೂಡ ಸುರೇಶ್ ಅವರಿಗೆ ನಷ್ಟವಾಗಿದೆ.
ಸರ್ಕಾರ ಸಂಕಷ್ಟದಲ್ಲಿರುವ ತಮಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಕೆರೆಯ ಮೀನು ಸಾಕುವ ಹಕ್ಕನ್ನು ಒಂದು ವರ್ಷದವರೆಗೆ ಮುಂದುವರೆಸಬೇಕು ಎಂದು ಮನವಿ ಮಾಡಿದ್ದಾರೆ.