alex Certify ನಮ್ಮಿಂದ ಸರ್ಕಾರ ರಚನೆಯಾದರೂ ನನ್ನ ಕಷ್ಟಕಾಲಕ್ಕೆ ಜೊತೆ ನಿಲ್ಲುತ್ತಿಲ್ಲ; ಬಿಜೆಪಿ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮಿಂದ ಸರ್ಕಾರ ರಚನೆಯಾದರೂ ನನ್ನ ಕಷ್ಟಕಾಲಕ್ಕೆ ಜೊತೆ ನಿಲ್ಲುತ್ತಿಲ್ಲ; ಬಿಜೆಪಿ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ

ಬೆಂಗಳೂರು: ನಮ್ಮಿಂದ ಸರ್ಕಾರ ರಚನೆ ಆಯಿತು ಆದರೆ, ಅವರು ನಮ್ಮ ಕಷ್ಟ ಕಾಲದಲ್ಲಿ ಬರಲಿಲ್ಲ. ನನ್ನ ಅನುಭವವನ್ನು ಬಳಸಿಕೊಂಡು ಸರ್ಕಾರ ರಚನೆಯಾದರೂ ಇಂದು ಕಷ್ಟಕಾಲದಲ್ಲಿ ನನ್ನ ಜೊತೆ ಯಾರೂ ನಿಲ್ಲುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್, ಬಿಜೆಪಿ ಬಗ್ಗೆ ಅಸಮಾಧಾನವಿಲ್ಲ. ಆದರೆ ನನ್ನ ಜೊತೆ ಬಂದವರೇ ನನ್ನ ಕಷ್ಟಕಾಲಕ್ಕೆ ಆಗುತ್ತಿಲ್ಲ. ನಾನು ಹೋರಾಟದಿಂದ ಬಂದವನು. ಎಲ್ಲವನ್ನು ಎದುರಿಸಿ ನಿಲ್ಲುತ್ತೇನೆ. ನನ್ನ ವಿರುದ್ಧ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗುತ್ತೇನೆ ಎಂದು ಹೇಳಿದರು.

ಸಾ.ರಾ. ಮಹೇಶ್ ಬಗ್ಗೆ ನಾನು ಮಾತನಾಡುವುದಿಲ್ಲ. ಸಾ.ರಾ ಮಹೇಶ್ ಕೊಚ್ಚೆ. ಕೊಚ್ಚೆಗೆ ಪದೇ ಪದೇ ಕಲ್ಲೆಸೆದು ನನ್ನ ಬಿಳಿ ವಸ್ತ್ರವನ್ನ ಕೊಳೆ ಮಾಡಿಕೊಳ್ಳೋದಿಲ್ಲ. ಆತ ಯಾರೋ ಬಾಯಿಗೆ ಬಂದಂತೆ ಮಾತನಾಡಿದರೆ ನಾನು ಪ್ರತಿಕ್ರಿಯಿಸಬೇಕಿಲ್ಲ ಎಂದು ತಿರುಗೇಟು ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...