alex Certify ಬಡಜನರ ಸಂಕಷ್ಟಕ್ಕೆ ಮಿಡಿದ ದಂಪತಿ: ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಮೀಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡಜನರ ಸಂಕಷ್ಟಕ್ಕೆ ಮಿಡಿದ ದಂಪತಿ: ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಮೀಲ್ಸ್

ಕೊರೊನಾ ವೈರಸ್​ ಮಹಾಮಾರಿ ಹಾಗೂ ಲಾಕ್​ಡೌನ್​ನಿಂದ ಜನರಿಗೆ ಇನ್ನೂ ಸುಧಾರಿಸಿಕೊಳ್ಳೋಕೆ ಆಗುತ್ತಿಲ್ಲ. ಭಾರತದಲ್ಲಂತೂ ವಲಸೆ ಕಾರ್ಮಿಕರು ಇಂದಿಗೂ ಒಂದೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಬಡ ಜನರ ಈ ಕಷ್ಟವನ್ನ ಅರಿಯ ಸಮರಿತನ್ಸ್ ಪುಷ್ಪರಾಣಿ ಸಿ ಹಾಗೂ ಆಕೆಯ ಪತಿ ಚಂದ್ರಶೇಖರ್​ ಬಡವರ ಕಷ್ಟಕ್ಕಾಗಿ ಮಿಡಿದಿದ್ದಾರೆ. ತಮಿಳುನಾಡಿನ ತಿರುಚಿ ನಿವಾಸಿಗಳಾದ ಈ ದಂಪತಿ ಬಡವರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ.

ವೆಲ್ಡರ್​ ಕೆಲಸ ಮಾಡೋ ಚಂದ್ರಶೇಖರ್​ ಲಾಕ್​ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ರು. ಆಗಸ್ಟ್​ನಲ್ಲಿ ಲಾಕ್​ಡೌನ್ ಸಂಪೂರ್ಣವಾಗಿ ತೆರವಾದ ಬಳಿಕ ಬ್ಯಾಂಕಿನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿ ಒಂದು ಸಣ್ಣ ಹೋಟೆಲ್​ ತೆರೆದು ಇದರಲ್ಲಿ ಕೇವಲ 1 ರೂಪಾಯಿ ಆಹಾರ ನೀಡುತ್ತಿದ್ದಾರೆ.

ಆದಾಯದ ಮೂಲವಿಲ್ಲದೇ ಒಂದೊತ್ತಿನ ಊಟಕ್ಕೂ ಪರಿತಪಿಸುವ ಜನರಿಗೆ ಇಲ್ಲಿ ಆಹಾರ ನೀಡಲಾಗುತ್ತೆ. ಇಲ್ಲಿಯವರೆಗೆ ಈ ದಂಪತಿ ಪ್ರತಿ ದಿನ 400ಕ್ಕೂ ಹೆಚ್ಚು ಮಂದಿಗೆ ಊಟ ಹಾಕಿದ್ದಾರೆ. ದಂಪತಿಯ ಈ ಕಾರ್ಯಕ್ಕೆ ಇವರ ಮಕ್ಕಳು ಕೂಡ ಕೈ ಜೋಡಿಸಿದ್ದು, ಗ್ರಾಹಕರಿಗೆ ವಿವಿಧ ಆಹಾರವನ್ನ ಬಡಿಸುವ ಕಾರ್ಯ ಮಾಡ್ತಾರೆ. ಇಲ್ಲಿ ಬೆಳಗ್ಗಿನ ತಿಂಡಿಗೆ 1 ರೂಪಾಯಿ ನಿಗದಿ ಮಾಡಲಾಗಿದ್ರೆ ಮಧ್ಯಾಹ್ನದ ಊಟದ ಬೆಲೆ 5 ರೂಪಾಯಿ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...