ದೇಶದ ಹೆಸರನ್ನು ಬ್ರಿಟಿಷರು ಬಿಟ್ಟುಹೋದ ಇಂಡಿಯಾ ಎಂಬುದರ ಬದಲಾಗಿ ಭಾರತ ಅಥವಾ ಹಿಂದುಸ್ತಾನ್ ಎಂದು ಕರೆಯಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಜೂನ್ 2 ರಂದು ನಡೆಯಲಿದೆ.
ದೆಹಲಿ ಮೂಲದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದು, ವಸಹತು ಶಾಹಿ ಕುರುಹು ಹೊಂದಿರುವ ಇಂಡಿಯಾದ ಬದಲಿಗೆ ಭಾರತ್ ಅಥವಾ ಹಿಂದುಸ್ತಾನ್ ಎಂದು ಹೆಸರಿಸಿದರೆ ಸೂಕ್ತ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಅರ್ಜಿಯ ವಿಚಾರಣೆ ಅಪೆಕ್ಸ್ ಕೋರ್ಟ್ ನಲ್ಲಿ ಆರಂಭವಾಗಬೇಕಾಗಿತ್ತಾದರೂ ಇದೀಗ ಮುಖ್ಯ ನ್ಯಾಯಪೀಠಕ್ಕೆ ವರ್ಗಾವಣೆಯಾಗಿದೆ. ಜೂನ್ 2ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ.