alex Certify ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಗೋಲ್ಗಪ್ಪಾ ಸವಿದ ಕೇಂದ್ರ ಸಚಿವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಗೋಲ್ಗಪ್ಪಾ ಸವಿದ ಕೇಂದ್ರ ಸಚಿವೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾನುವಾರ ವಾರಣಾಸಿಯ ಮಹದೇವ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಪಾನಿಪುರಿಯನ್ನ ಸವಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಕಾಶಿ ವಲಯದಲ್ಲಿ ಬರುವ 16 ಜಿಲ್ಲೆಗಳ ಬಿಜೆಪಿ ಕಚೇರಿ, ಸಂಸದರು ಹಾಗೂ ಶಾಸಕರ ಸಾಂಸ್ಥಿಕ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಸ್ಮೃತಿ ಇರಾನಿ ಉತ್ತರ ಪ್ರದೇಶದಲ್ಲಿದ್ದರು. ಈ ಸಭೆಯ ಅಧ್ಯಕ್ಷತೆಯನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಲಂಕರಿಸಿದ್ದರು.

ಕೆಲಸದ ಪ್ರವಾಸದ ನಡುವೆಯೇ ಪಾನಿಪುರಿ ಅಂಗಡಿಗೆ ಭೇಟಿ ನೀಡಿದ ಸ್ಮೃತಿ ಇರಾನಿ ಗೋಲ್ಗಪ್ಪಾವನ್ನು ಸಖತ್​ ಎಂಜಾಯ್​ ಮಾಡ್ಕೊಂಡು ಸವಿದಿದ್ದಾರೆ. ವರದಿದಾರರು ಅವರ ಬಳಿಕ ಅನುಭವವನ್ನ ಕೇಳುತ್ತಿದ್ದಂತೆಯೇ ಹರ್​ ಹರ್​ ಮಹಾದೇವ್​ ಎಂದು ಹೇಳಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಹಾದೇವ್​ ದೇಗುಲಕ್ಕೆ ಭೇಟಿ ನೀಡಿದ ಫೋಟೋವನ್ನ ಶೇರ್ ಮಾಡಿದ್ದಾರೆ. ಕಾಶಿ ನಿಮ್ಮನ್ನು ಕರೆದಾಗ ಎಂದು ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...