alex Certify ತಬ್ಲಿಘಿ ಮುಖಂಡರಿಗೆ ಪೊಲೀಸರಿಂದ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಬ್ಲಿಘಿ ಮುಖಂಡರಿಗೆ ಪೊಲೀಸರಿಂದ ಬಿಗ್ ಶಾಕ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡಲು ಕಾರಣವಾದ ತಬ್ಲಿಘಿ ಜಮಾತ್ ಸಂಘಟನೆ ಮುಖ್ಯಸ್ಥ ಮೌಲಾನ ಸಾದ್ ಅವರ 5 ಮಂದಿ ಸಹಚರರ ಪಾಸ್ಪೋರ್ಟ್ ಗಳನ್ನು ಜಪ್ತಿ ಮಾಡಲಾಗಿದೆ.

ದೆಹಲಿ ಅಪರಾಧ ವಿಭಾಗದ ಪೊಲೀಸರು ತಬ್ಲಿಘಿ ಜಮಾತ್ ಸಂಘಟನೆಯ ಐದು ಮಂದಿ ಪಾಸ್ ಪೋರ್ಟ್ ಗಳನ್ನು ಜಪ್ತಿ ಮಾಡಿದ್ದಾರೆ. ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲಾಮಿ ಮರ್ಕಜ್ ಬಂಗ್ಲೆವಾಲಿ ಮಸೀದಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಸಮಾವೇಶದಲ್ಲಿ ಇವರೆಲ್ಲ ಭಾಗಿಯಾಗಿದ್ದರು.

ಮುರ್ಸಾಲಿನ್ ಸೈಫಿ ಎಂಬಾತ ವಿದೇಶಗಳಿಂದ ತಬ್ಲಿಘಿ ಜಮಾತ್ ಗೆ ಹಣಕಾಸಿನ ನೆರವು ಹರಿದು ಬರುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದು, ಆತ ಸೇರಿ ಐದು ಮಂದಿ ವಿರುದ್ಧ ಮಾರ್ಚ್ 31 ರಂದು ಎಫ್ಐಆರ್ ದಾಖಲಿಸಲಾಗಿದ್ದು ಈಗ ಪಾಸ್ಪೋರ್ಟ್ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...