alex Certify ಆಮ್ಲಜನಕ ಪೂರೈಕೆ ಇಲ್ಲದೆಯೇ ಸೋಂಕಿತ ಸಾವನ್ನಪ್ಪಿದ್ದರೆ ಅದು ನರಮೇಧಕ್ಕೆ ಸಮ: ಹೈಕೋರ್ಟ್​ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕ ಪೂರೈಕೆ ಇಲ್ಲದೆಯೇ ಸೋಂಕಿತ ಸಾವನ್ನಪ್ಪಿದ್ದರೆ ಅದು ನರಮೇಧಕ್ಕೆ ಸಮ: ಹೈಕೋರ್ಟ್​ ಮಹತ್ವದ ಹೇಳಿಕೆ

ಕೊರೊನಾ 2ನೇ ಅಲೆಯ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಅಲಹಾಬಾದ್​ ಹೈಕೋರ್ಟ್​ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಯು ಸಾವನ್ನಪ್ಪಿದರೆ ಅದು ಅಪರಾಧ ಕೃತ್ಯದಲ್ಲಿ ಬರಲಿದೆ ಹಾಗೂ ಇದು ಯಾವುದೇ ಕೊಲೆ ಪ್ರಕರಣಕ್ಕಿಂತ ಕಡಿಮೆಯಲ್ಲ ಎಂದು ಹೇಳಿದೆ.

ಕೋವಿಡ್​ 19 ಸೋಂಕು ಹೆಚ್ಚುತಿರುವ ಸಂದರ್ಭದಲ್ಲೇ ವೈದ್ಯಕೀಯ ಆಮ್ಲಜನಕದ ಅಭಾವ ಉಂಟಾಗಿದ್ದನ್ನ ಗಮನಿಸಿರುವ ಅಲಹಾಬಾದ್​ ಹೈಕೋರ್ಟ್​ ಈ ಹೇಳಿಕೆಯನ್ನ ನೀಡಿದೆ.

ವೈದ್ಯಕೀಯ ಆಮ್ಲಜನಕದ ಅಭಾವದಿಂದಾಗಿ ದೇಶದಲ್ಲಿ ಕೊರೊನಾ ರೋಗಿಗಳು ಸಾವಿಗೀಡಾಗುತ್ತಿರೋದು ನಿಜಕ್ಕೂ ಒಂದು ಆಘಾತಕಾರಿ ಪ್ರಕರಣವಾಗಿದೆ. ಇಂತಹ ಆಸ್ಪತ್ರೆಗಳು ಅಪರಾಧದ ಕೃತ್ಯಗಳನ್ನ ಎಸಗುತ್ತಿವೆ ಹಾಗೂ ಇದು ಯಾವುದೇ ಕೊಲೆ ಪ್ರಕರಣಕ್ಕಿಂತ ಕಡಿಮೆಯಲ್ಲ ಎಂದು ನ್ಯಾಯಮೂರ್ತಿ ಅಜಿತ್​ ಕುಮಾರ್​ ಹಾಗೂ ಸಿದ್ಧಾರ್ಥ ವರ್ಮಾ ನೇತೃತ್ವದ ಪೀಠ ಹೇಳಿದೆ.

ಆಮ್ಲಜನಕ ಸಿಲಿಂಡರ್​ಗಳನ್ನ ಶೇಖರಣೆ ಮಾಡಿಟ್ಟುಕೊಳ್ಳೋದು ಹಾಗೂ ತಮ್ಮ ಪ್ರೀತಿಪಾತ್ರರಾಗಿ ಆಕ್ಸಿಜನ್​ ಸಿಲಿಂಡರ್​ಗೆ ಬೇಡಿಕೆ ಇಟ್ಟ ಕುಟುಂಬಸ್ಥರಿಗೆ ಸಿಲಿಂಡರ್​ ನೀಡದೇ ಸತಾಯಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದು ಮಾತ್ರವಲ್ಲದೇ ಕಳೆದ ಭಾನುವಾರ ಮೀರತ್​​ ವೈದ್ಯಕೀಯ ಕಾಲೇಜಿನಲ್ಲಿ ಐದು ರೋಗಿಗಳು ಆಕ್ಸಿಜನ್​ ಇಲ್ಲದೆಯೇ ಸಾವನ್ನಪ್ಪಿರುವ ಸುದ್ದಿ ವೈರಲ್​ ಆಗಿದೆ. ಇದು ಮಾತ್ರವಲ್ಲದೇ ಗೋಮತಿ ನಗರದ ಸನ್​ ಆಸ್ಪತ್ರೆ ಹಾಗೂ ಮೀರತ್​ನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಬೇಡಿಕೆ ನಂತರವೂ ಆಕ್ಸಿಜನ್​ ಪೂರೈಕೆಯಾಗಿಲ್ಲ ಎಂದು ವೈದ್ಯರು ಕೈ ಚೆಲ್ಲಿದ್ದಾರೆ. ಈ ಎಲ್ಲಾ ಸುದ್ದಿಗಳು ಆಕ್ಸಿಜನ್​​ ಪೂರೈಕೆ ಸರಿಯಾಗಿದೆ ಎಂಬ ಸರ್ಕಾರದ ಹೇಳಿಕೆಗೂ ತದ್ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,80,000 ಹೊಸ ಪ್ರಕರಣಗಳು ವರದಿಯಾಗಿದೆ. ಮಾತ್ರವಲ್ಲದೇ ಒಂದು ದಿನದಲ್ಲಿ 3,783 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...