alex Certify 26 ವರ್ಷಗಳ ಬಳಿಕ ಪುರಿಯಲ್ಲಿ ನಡೆಯುತ್ತಿದೆ ವಿಶೇಷ ಪೂಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

26 ವರ್ಷಗಳ ಬಳಿಕ ಪುರಿಯಲ್ಲಿ ನಡೆಯುತ್ತಿದೆ ವಿಶೇಷ ಪೂಜೆ

ಪುರಿಯ ಜಗನ್ನಾಥ ಮಂದಿರದಲ್ಲಿಂದು ದೇವತೆಗಳಾದ ಜಗನ್ನಾಥ, ಸುಭದ್ರೆ ಹಾಗೂ ಬಾಲಭದ್ರರಿಗೆ ನಾಗಾರ್ಜುನ ವೇಷದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು. 26 ವರ್ಷಗಳ ಬಳಿಕ ಈ ವಿಶೇಷ ಪೂಜೆ ಮಾಡಲಾಗುತ್ತಿದೆ.

1994ರಲ್ಲಿ ಕಳೆದ ಬಾರಿ ನಾಗಾರ್ಜುನ ವೇಷ ಪೂಜೆ ಮಾಡಲಾಗಿತ್ತು. ಕೋವಿಡ್-19 ಕಾರಣದಿಂದಾಗಿ ಈ ಬಾರಿ ಸಂಭ್ರಮಾಚರಣೆಯ ವೇಳೆ ಅಷ್ಟಾಗಿ ಸದ್ದು-ಗದ್ದಲ ಕಾಣದು. ದೇವಸ್ಥಾನದ ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ 2 ಗಂಟೆಯಿಂದ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ.

ಕಾರ್ತಿಕೆಯ ಪವಿತ್ರ ಮಾಸದಲ್ಲಿ ಪರಶುರಾಮನಿಗೆ ಗೌರವ ಸಲ್ಲಿಸಲೆಂದು ಈ ನಾಗಾರ್ಜುನ ವೇಷದ ಪೂಜೆ ಮಾಡಲಾಗುತ್ತದೆ. ಈ ವೇಳೆ ವಿಶೇಷ ಆಭರಣಗಳಾದ ಶ್ರೀ ಭುಜ, ಶ್ರೀ ಪಾಯರ, ನಕುವಾಸಿ, ಕರ್ಣ ಕುಂಡಲಗಳನ್ನು ದೇವತೆಗಳಿಗೆ ಹಾಕಿ ಅಲಂಕರಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಜಗನ್ನಾಥನ ಭಕ್ತಗಣ ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ವಿಶೇಷ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್‌ ಈ ಸುದಿನಕ್ಕೆ ವಿಶೇಷವಾದ ಕಲಾಕೃತಿ ರಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...