alex Certify ನೀವು ಭೇಟಿ ನೀಡಲೇಬೇಕಾದ ಕ್ಷೇತ್ರ ಅಂಬಲಪುಜ ಶ್ರೀ ಕೃಷ್ಣ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಭೇಟಿ ನೀಡಲೇಬೇಕಾದ ಕ್ಷೇತ್ರ ಅಂಬಲಪುಜ ಶ್ರೀ ಕೃಷ್ಣ ದೇಗುಲ

ದೇವರ ನಾಡು ಎಂದೇ ಹೆಸರು ಪಡೆದಿರುವ ಕೇರಳದಲ್ಲಿ ನಿಮಗೆ ಗಲ್ಲಿಗೊಂದು ದೇವಸ್ಥಾನಗಳು ಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯ ಕೂಡ ಹೌದು. ಇಲ್ಲಿ ಶ್ರೀಕೃಷ್ಣ ಪಾರ್ಥಸಾರಥಿಯ ರೂಪದಲ್ಲಿ ಒಂದು ಕೈಯಲ್ಲಿ ಶಂಖ ಹಾಗೂ ಮತ್ತೊಂದು ಕೈಯಲ್ಲಿ ಚಾವಟಿಯನ್ನ ಹಿಡಿದು ಭಕ್ತರಿಗೆ ದರ್ಶನವನ್ನ ನೀಡುತ್ತಿದ್ದಾನೆ.

ಈ ಭವ್ಯ ದೇವಸ್ಥಾನಕ್ಕೆ ಬರೋಬ್ಬರಿ 17 ಶತಮಾನಗಳ ಹಿಂದಿನ ಇತಿಹಾಸವಿದೆ. ಪುರದಂ ತಿರುನಾಳ್​ ದೇವನಾರಾಯಣ್​ ತಂಪುರನ್​ ಎಂಬ ಆಡಳಿತಗಾರ ಈ ದೇವಾಲಯ ನಿರ್ಮಾಣ ಮಾಡಿದ್ದಾನೆ ಎಂಬ ನಂಬಿಕೆ ಇದೆ. ತಂಪುರನ್​ ಆರಾಧ್ಯ ಗುರಗಳಾದ ವಿಲ್ವಮಂಗಲರಿಗೆ ಈ ಸ್ಥಳದಲ್ಲಿ ಕೃಷ್ಣನ ಕೊಳಲಿನ ನಾದ ಕೇಳಿದ್ದರಿಂದ ಈ ಜಾಗದಲ್ಲಿ ಶ್ರೀ ಕೃಷ್ಣನ ದೇಗುಲ ನಿರ್ಮಾಣವಾಯ್ತು ಎಂಬ ನಂಬಿಕೆ ಇದೆ.

ಈ ದೇಗುಲಕ್ಕೂ ಟಿಪ್ಪು ಸುಲ್ತಾನನಿಗೂ ಸಂಬಂಧವಿದೆ. ಟಿಪ್ಪು ಸುಲ್ತಾನನ ಆಕ್ರಮಣದ ಸಂದರ್ಭದಲ್ಲಿ ಗುರುವಾಯೂರಿನ ಶ್ರೀಕೃಷ್ಣ ವಿಗ್ರಹವನ್ನ ಇದೇ ದೇವಾಲಯದಲ್ಲಿ ಇಡಲಾಗಿತ್ತು. 1789ರಿಂದ ಸರಿ ಸುಮಾರು ಹತ್ತನ್ನೆರಡು ವರ್ಷಗಳ ಕಾಲ ಇಲ್ಲೇ ವಿಗ್ರಹ ಇತ್ತು ಎಂದು ಹೇಳಲಾಗುತ್ತೆ. ಹೀಗಾಗಿಯೇ ಈಗಲೂ ಗುರುವಾಯೂರಪ್ಪ ಪ್ರಸಾದ ಸ್ವೀಕರಿಸಲು ಈ ದೇಗುಲಕ್ಕೆ ಭೇಟಿ ನೀಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ಈ ದೇವಸ್ಥಾನದ ಮತ್ತೊಂದು ವಿಶೇಷ ಪಾಲಪಾಯಸಂ. ಅನ್ನ ಹಾಗೂ ಹಾಲಿನಿಂದ ತಯಾರಿಸಿದ ಈ ಸಿಹಿ ಖಾದ್ಯ ತಿನ್ನೋದೇ ಪರಮಾನಂದ. ಈ ಜಾಗಕ್ಕೆ ಕೃಷ್ಣ ಸಾಧುವಿನ ವೇಷ ತೊಟ್ಟು ಬಂದಿದ್ದ ಎಂದೂ ಹೇಳಲಾಗುತ್ತೆ.

ಮಕ್ಕಳಗಾದೇ ಸಂಕಷ್ಟ ಅನುಭವಿಸುತ್ತಿರುವ ದಂಪತಿ ಇಲ್ಲಿಗೆ ಬಂದು ಹರಕೆಯ ರೂಪದಲ್ಲಿ ತೊಟ್ಟಿಲ್ಲನ್ನ ಕಟ್ಟುತ್ತಾರೆ. ಈ ದೇಗುಲಕ್ಕೆ ಕೇರಳ ಮಾತ್ರವಲ್ಲದೇ ನೆರೆ ರಾಜ್ಯಗಳಿಂದಲೂ ಭಕ್ತಸಾಗರವೇ ಹರಿದು ಬರುತ್ತೆ.

ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಅಲೆಪ್ಪಿಯಿಂದ ಈ ಕ್ಷೇತ್ರ ಕೇವಲ 14 ಕಿಲೋಮೀಟರ್​ ದೂರದಲ್ಲಿದೆ. ಇಲ್ಲಿಂದ ನಿಮಗೆ ಬಸ್​ ಸೌಕರ್ಯವಿದ್ದು ನೀವು ಆರಾಮಾಗಿ ಕೃಷ್ಣನ ದೇಗುಲ ತಲುಪಬಹುದು.

4

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...