ಮುಂಬೈ: ಗಣೇಶ ಚತುರ್ಥಿ ಆಚರಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಮುಂಬೈನ ಜಿ.ಎಸ್.ಬಿ. ಸೇವಾ ಮಂಡಲ ಗಣೇಶೋತ್ಸವ ಸಮಿತಿ ಈ ಕುರಿತು ತೀರ್ಮಾನ ಕೈಗೊಂಡಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಜಾತ್ರೆ, ಉತ್ಸವಗಳನ್ನು ರದ್ದುಪಡಿಸಲಾಗಿದೆ. ಗಣೇಶೋತ್ಸವ ಆಚರಣೆ ಮೇಲೆ ಕೊರೋನಾ ಪರಿಣಾಮ ಬೀರಿದ್ದು ಆಗಸ್ಟ್ 22 ರಿಂದ 10 ದಿನಗಳ ಕಾಲ ಹಮ್ಮಿಕೊಂಡಿದ್ದ ಗಣೇಶೋತ್ಸವವನ್ನು ಮುಂಬೈನ ಜಿ.ಎಸ್.ಬಿ. ಗಣೇಶೋತ್ಸವ ಸಮಿತಿ ಮುಂದೂಡಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಮಾಘ ಶುದ್ಧ ಚತುರ್ಥಿಯಂದು ಗಣೇಶೋತ್ಸವ ಆಚರಿಸಲಾಗುವುದು.
ಮುಂಬೈನಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧವಾದ ಗಣೇಶ ಮಂಡಲವಾಗಿರುವ ಜಿ.ಎಸ್.ಬಿ. ಗಣೇಶೋತ್ಸವ ಸಮಿತಿ ವತಿಯಿಂದ ಮುಂದಿನ ವರ್ಷ ಫೆಬ್ರವರಿಯಲ್ಲಿ ಗಣೇಶೋತ್ಸವ ಆಚರಿಸಲಾಗುವುದು.