ಇಡೀ ದೇಶದಾದ್ಯಂತ ದೇಶಿ ವಿಮಾನಗಳ ಹಾರಾಟ ಇಂದಿನಿಂದ ಶುರುವಾಗಿದೆ. ಕಳೆದ ಎರಡು ತಿಂಗಳಿಂದ ದೇಶಿ ವಿಮಾನಗಳ ಹಾರಾಟ ರದ್ದಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಜನರು ಈಗ ತಮ್ಮ ತವರು ತಲುಪುತ್ತಿದ್ದಾರೆ. ಈದ್ ಕಾರಣ ಕೆಲವರು ಸಂಬಂಧಿಕರ ಭೇಟಿಗೆ ಹೊರಟಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದ್ಮೇಲೆ ಅನೇಕ ವಿಮಾನ ರದ್ದಾಗಿದ್ದು, ಪ್ರಯಾಣಿಕರಿಗೆ ಗೊತ್ತಾಗಿದೆ. ಇದರಿಂದ ತೊಂದರೆಯಾಗಿದೆ. ಮತ್ತೆ ಕೆಲವರು ಅನೇಕ ದಿನಗಳ ನಂತ್ರ ವಿಮಾನವೇರುತ್ತಿದ್ದು, ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮಧ್ಯೆ ತಮ್ಮ ತವರು ತಲುಪುತ್ತಿರುವ ಖುಷಿ ಜನರ ಮುಖದಲ್ಲಿದೆ.
ಬಿಜೆಡಿ ಸಂಸದ ಅನುಭವ್ ಮೊಹಂತಿ ಸೋಮವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಅವರು, ದೆಹಲಿ-ಒಡಿಶಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬಜೆಟ್ ಅಧಿವೇಶನದ ವೇಳೆ ದೆಹಲಿಗೆ ಬಂದಿದ್ದ ಅವರು ಅಲ್ಲಿಯೇ ಸಿಕ್ಕಿಬಿದ್ದಿದ್ದರಂತೆ.