alex Certify SHOCKING: ಅನ್ಯ ಜಾತಿ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಅನ್ಯ ಜಾತಿ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನ ಹತ್ಯೆ

ಬೇರೆ ಜಾತಿಗೆ ಸೇರಿದ ಗೆಳತಿಯನ್ನ ಭೇಟಿಯಾಗಲು ಹೋದ 22 ವರ್ಷದ ದಲಿತ ಯುವಕನನ್ನ ಆಕೆಯ ಕುಟುಂಬಸ್ಥರು ಕಟ್ಟಿ ಹಾಕಿ, ತಲೆಗೆ ಹೊಡೆದು ಥಳಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ದಲಿತ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಯುವತಿಯ ಕುಟುಂಬದ ಐವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಯುವಕನನ್ನ ಪವನ್​ ಕುಮಾರ್​ ಎಂದು ಗುರುತಿಸಲಾಗಿದೆ ಈತ ಪ್ರೇಮ್​ ನಗರ ನಿವಾಸಿಯಾಗಿದ್ದು ಈ ಘಟನೆ ರಾಸಲ್​ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುಮಾರ್​ ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ ಈತ 20 ವರ್ಷದ ಯುವತಿಯನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆ ಶಾಂತಿ ನಗರದ ನಿವಾಸಿಯಾಗಿದ್ದು ಕಳೆದ 1 ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರು. ಆತನನ್ನ ಭೇಟಿಯಾಗಲು ಆಕೆ ಕರೆದಿದ್ದಳು. ಈ ವೇಳೆ ಯುವತಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.

ಗಾಯಗೊಂಡ ಪವನ್ ಸಹಾಯಕ್ಕಾಗಿ ಅಂಗಲಾಚುತ್ತಿರೋದನ್ನ ಕಂಡ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಪವನ್​ ಸಹೋದರ ಆಕಾಶ್​, ನಮಗೆ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ವಿಚಾರ ತಿಳಿಯಿತು. ಆತ ಪೊಲೀಸ್​ ವ್ಯಾನ್​ನಲ್ಲಿ ಮಲಗಿದ್ದನ್ನ ನಾವು ನೋಡಿದೆವು. ಆತನನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯ್ತು. ಸಾಯೋಕೂ ಮುನ್ನ ಆತ ಎಲ್ಲಾ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದ. ಆ ಯುವತಿ ಕರೆದಿದ್ದಕ್ಕೆ ಪವನ್​ ಆಕೆಯ ನಿವಾಸದ ಬಳಿ ತೆರಳಿದ್ದ. ಆಕೆಯ ಕುಟುಂಬಸ್ಥರು ಆತನನ್ನ ಹೊಡೆದು ಸಾಯಿಸಿದ್ದಾರೆ ಎಂದು ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...