alex Certify ಈ ಯುವಕರ ಮಾನವೀಯತೆಗೆ ಹೇಳಿ ಹ್ಯಾಟ್ಸಾಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯುವಕರ ಮಾನವೀಯತೆಗೆ ಹೇಳಿ ಹ್ಯಾಟ್ಸಾಫ್

ಕೊಲ್ಕತ್ತಾ:‌ ನೈಸರ್ಗಿಕ ಅನಾಹುತಗಳು ಜನರನ್ನು ಬೀದಿಗೆ ತಂದು ನಿಲ್ಲಿಸುತ್ತವೆ. ಮನೆ, ಮಠ ಕಳೆದುಕೊಂಡು ಜನರು ತಮ್ಮ ಜೀವ ಹೇಗೆ ಉಳಿಸಿ ಕೊಳ್ಳುವುದು ಎಂದು ಪರದಾಡುತ್ತಾರೆ. ಈಗ ಕೊಲ್ಕತ್ತಾ ಮತ್ತು ಒಡಿಶಾದ ಜನರ ಬದುಕು ಹೀಗೆ ಆಗಿದೆ.

ಅಂಫಾನ್ ಚಂಡಮಾರುತಕ್ಕೆ ಅಲ್ಲಿಯ ಜನರು ನಲುಗಿಹೋಗಿದ್ದಾರೆ. ಎಲ್ಲ ಕಡೆ ತುಂಬಿರುವ ನೀರು, ಬಿದ್ದ ಮನೆಗಳು ವಿದ್ಯುತ್ ಕಂಬಗಳು, ಕೊಚ್ಚಿಹೋದ ಬೆಳೆ, ವಾಹನಗಳು ಜನರು ಮುಂದೇನು ಎಂದು ಯೋಚಿಸುವ ಹಾಗೆ ಮಾಡಿದೆ.

ತಮ್ಮ ಜೀವ ಉಳಿಸಿಕೊಂಡರೆ ಸಾಕು ಎಂಬಂತಾಗಿದೆ. ಮನುಷ್ಯರ ಪರಿಸ್ಥಿತಿಯೇ ಹೀಗಾದರೆ ಪ್ರಾಣಿಗಳ ಪರಿಸ್ಥಿತಿ ಇನ್ನೂ ಹೇಳತೀರದು. ಜೀವ ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಎಷ್ಟೋ ಜನರು ಪ್ರಾಣಿಗಳ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಎಷ್ಟೋ ಜನರು ಪ್ರಾಣಿಗಳೊಂದಿಗೆ ಕೆಟ್ಟದಾಗಿ ವರ್ತಿಸಿ ಮನುಷ್ಯತ್ವದ ಬಗ್ಗೆ ಅನುಮಾನ ಬರುವ ಹಾಗೆ ನಡೆದುಕೊಳ್ಳುತ್ತಾರೆ. ಮತ್ತೆ ಕೆಲವರು ಇಂತಹ ಕೆಟ್ಟ ಪರಿಸ್ಥಿತಿ, ಇಂತಹ ಆಪತ್ಕಾಲದಲ್ಲಿ ತಮ್ಮ ಜೀವ ಮಾತ್ರ ಉಳಿಸಿಕೊಳ್ಳುವ ಬದಲು ಪ್ರಾಣಿಗಳ ಬಗ್ಗೆಯೂ ಯೋಚಿಸುತ್ತಾರೆ.

ಕೊಲ್ಕತ್ತಾದ ಈ ವಿಡಿಯೋ ಜನರಲ್ಲಿ ಮಾನವೀಯತೆ ಬಗ್ಗೆ ನಂಬಿಕೆ ಉಳಿಯುವಂತೆ ಮಾಡಿದೆ. ಚಂಡಮಾರುತದಿಂದಾಗಿ ಅಪಾಯದಲ್ಲಿ ಸಿಲುಕಿದ್ದ ನಾಯಿಯನ್ನು ಇಬ್ಬರು ಯುವಕರು ಕಾಪಾಡಿದ್ದಾರೆ. ಹೆದರಿ ಕೂತಿದ್ದ ನಾಯಿಯನ್ನು ನೀರಿನಲ್ಲಿ ಹೋಗಿ ಎತ್ತಿಕೊಳ್ಳಲು ನೋಡಿದಾಗ ಹೆದರಿದ ನಾಯಿ ವಿರೋಧ ತೋರಿಸುತ್ತದೆ. ಆದರೆ, ಎತ್ತಿಕೊಂಡು ಮತ್ತೊಬ್ಬನಿಗೆ ದಾಟಿಸಿದ ಮೇಲೆ ಯುವಕನ ಪ್ರೀತಿಗೆ ಸುಮ್ಮನಾಗುತ್ತದೆ ಈ ವಿಡಿಯೋ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...