alex Certify ನಾಚಿಕೆಗೇಡು: ಕೊರೊನಾ ಸೋಂಕಿತೆ ಶವವನ್ನೂ ಬಿಡದ ದುಷ್ಟರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಚಿಕೆಗೇಡು: ಕೊರೊನಾ ಸೋಂಕಿತೆ ಶವವನ್ನೂ ಬಿಡದ ದುಷ್ಟರು

ನಾಚಿಕೆಗೇಡಿನ ಘಟನೆ ಕೊಯಂಬತ್ತೂರ್ ನಲ್ಲಿ ನಡೆದಿದೆ. ಇಲ್ಲಿನ ಮಹಿಳೆಯೊಬ್ಬಳು ಕೊರೊನಾದಿಂದ ಸಾವನ್ನಪ್ಪಿದ್ದಾಳೆ. ಆದ್ರೆ ನಾಚಿಕೆಗೇಡಿ ಜನರು ಶವದ ಕೈನಲ್ಲಿದ್ದ ಬಂಗಾರದ ಬಳೆಯನ್ನು ಕದ್ದಿದ್ದಾರೆ.

ಮೃತ ಮಹಿಳೆ ವಯಸ್ಸು 60 ವರ್ಷ.‌ ಕೊಯಂಬತ್ತೂರ್ ಮೆಡಿಕಲ್ ಕಾಲೇಜಿನಲ್ಲಿ ಈಕೆ ಮೃತಪಟ್ಟಿದ್ದಳು. ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ವೇಳೆ ಆಕೆ ಆರೋಗ್ಯ ಹೆಚ್ಚು ಹದಗೆಟ್ಟಿರಲಿಲ್ಲ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡಿದ್ದಲ್ಲದೆ ಮಹಿಳೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ.

ಈ ವೇಳೆ ಆಕೆ ಜೊತೆಯಲ್ಲಿದ್ದ ಮಗಳು ತಾಯಿ ಕೈ ನೋಡಿದ್ದಾಳೆ. ಕೈನಲ್ಲಿದ್ದ ಬಂಗಾರದ ಬಳೆ ಅಲ್ಲಿರಲಿಲ್ಲ. ಈ ಬಗ್ಗೆ ವೈದ್ಯರಿಗೆ ಹೇಳಿದ್ದಾಳೆ. ವೈದ್ಯರು ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದಾರೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...