alex Certify ಬಡ ಮಕ್ಕಳ ಹಸಿವು ನೀಗಿಸಿದ ಪೊಲೀಸ್‌ ಪೇದೆ: ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಮಕ್ಕಳ ಹಸಿವು ನೀಗಿಸಿದ ಪೊಲೀಸ್‌ ಪೇದೆ: ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

ತಾವು ಮಾಡಿದ ಮಾನವೀಯ ಕಾರ್ಯದಿಂದಾಗಿ ಇಂಟರ್ನೆಟ್​​ನಲ್ಲಿ  ಹೈದರಾಬಾದ್​ನ ಟ್ರಾಫಿಕ್​ ಕಾನ್​ಸ್ಟೇಬಲ್​​​ ಎಸ್​. ಮಹೇಶ್​ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನ ಸಂಪಾದಿಸುತ್ತಿದ್ದಾರೆ.

ಟ್ವಿಟರ್​ನಲ್ಲಿ ತೆಲಂಗಾಣ ಪೊಲೀಸರು ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ ಇಬ್ಬರು ಅನಾಥ ಮಕ್ಕಳು ಎಲ್ಲರ ಬಳಿಯಲ್ಲಿ ಊಟಕ್ಕಾಗಿ ಬೇಡುತ್ತಿರೋದನ್ನ ಪೊಲೀಸ್​ ಕಾನ್​ಸ್ಟೇಬಲ್​ ನೋಡಿದ್ದಾರೆ. ಈ ಮಕ್ಕಳ ಬಳಿಗೆ ತೆರಳಿದ ಮಹೇಶ್​ ಕುಮಾರ್​​​ ತಮ್ಮ ಊಟದ ಡಬ್ಬಿಯನ್ನ ತೆಗೆದು ಮಕ್ಕಳಿಗೆ ಊಟವನ್ನ ನೀಡಿದ್ದಾರೆ.

ಸೋಮಯಾಜಿಗುಡ ಏರಿಯಾದಲ್ಲಿ ಗಸ್ತು ತಿರುಗುವ ಡ್ಯೂಟಿಯಲ್ಲಿದ್ದ ವೇಳೆ ಮಹೇಶ್​ ಕುಮಾರ್​ ಈ ಮಾನವೀಯ ಕಾರ್ಯ ಮಾಡಿದ್ದಾರೆ.

ಮದುವೆ ನೆಪದಲ್ಲಿ ದೈಹಿಕ ಸಂಬಂಧ: ಯುವತಿ ಮೇಲೆ 8 ತಿಂಗಳು ಅತ್ಯಾಚಾರ, ಯುವಕನ ವಿರುದ್ಧ ದೂರು

ಪಂಜಗುಟ್ಟಾ ಟ್ರಾಫಿಕ್​ ಪೊಲೀಸ್​ ಪೇದೆ ಮಹೇಶ್​​ ಸೋಮಯಾಜಿಗುಡಾದಲ್ಲಿ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಇಬ್ಬರು ಮಕ್ಕಳು ಎಲ್ಲರ ಬಳಿ ಊಟಕ್ಕಾಗಿ ಬೇಡುತ್ತಿರೋದನ್ನ ಗಮನಿಸಿದ್ದಾರೆ. ಕೂಡಲೇ ಮಕ್ಕಳ ಬಳಿ ತೆರಳಿದ ಮಹೇಶ್,​ ಅವರಿಗೆ ತಮ್ಮ ಊಟದ ಡಬ್ಬಿಯಲ್ಲಿದ್ದ ಊಟವನ್ನ ನೀಡಿದ್ದಾರೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮಹೇಶ್​, ಆ ಮಕ್ಕಳು ಊಟಕ್ಕಾಗಿ ಹುಡುಕಾಡುತ್ತಿರೋದನ್ನ ಗಮನಿಸಿದೆ. ಆವತ್ತು ನಾನು ರಾತ್ರಿ ಊಟ ಮಾಡೋದು ಒಂದು ಗಂಟೆ ತಡವಾಯ್ತು ಅಷ್ಟೇ. ಆದರೆ ಒಂದು ವೇಳೆ ನಾನು ಮಕ್ಕಳಿಗೆ ಊಟವನ್ನ ನೀಡಿಲ್ಲವಾಗಿದ್ದರೆ ಅವರು ಹಸಿದುಕೊಂಡೇ ಮಲಗಬೇಕಿತ್ತು ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...