alex Certify ಮೇಕೆ ವಿಚಾರಕ್ಕೆ ಶುರುವಾದ ಜಗಳ ಅವಳಿ ಕೊಲೆಯಲ್ಲಿ ಅಂತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆ ವಿಚಾರಕ್ಕೆ ಶುರುವಾದ ಜಗಳ ಅವಳಿ ಕೊಲೆಯಲ್ಲಿ ಅಂತ್ಯ…!

ಹಳ್ಳಿಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಅಕ್ಕ ಪಕ್ಕದ ಮನೆಯ ನಡುವೆ ಗಲಾಟೆಗಳು ನಡೆಯೋದು ಕಾಮನ್​. ಆದರೆ ಆಗ್ರಾದ ಹಳ್ಳಿಯೊಂದರಲ್ಲಿ ಮೇಕೆ ವಿಚಾರವಾಗಿ ನಡೆದ ಜಗಳವೊಂದು ತಂದೆ ಹಾಗೂ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.

ಭೀಕಂ ಸಿಂಗ್​​ ಎಂಬವರಿಗೆ ಸೇರಿದ ಮೇಕೆ ಗ್ಯಾನಿ ಎಂಬವರ ಮನೆಗೆ ಪ್ರವೇಶಿಸಿದೆ. ಯಾರೋ ಮೇಕೆಗೆ ಕೋಲಿನಿಂದ ಹೊಡೆದು ಅದರ ಕಾಲನ್ನ ಮುರಿದಿದ್ದರು. ಇದು ಮೇಕೆ ಮಾಲೀಕರ ಮನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಜಗಳ ತಾರಕ್ಕೇರುತ್ತಿದ್ದಂತೆಯೇ ಗ್ಯಾನಿ ಪಿಸ್ತೂಲ್​ನಿಂದ 20 ವರ್ಷದ ಜೀತೇಂದ್ರ ಹಾಗೂ ಆತನ ತಂದೆ ಭೀಕಂ ಸಿಂಗ್​ ಮೇಲೆ ಗುಂಡು ಹಾರಿಸಿದ್ದಾನೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬಸೌನಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಅವಳಿ ಕೊಲೆ ಆರೋಪಿ ಗ್ಯಾನಿ ಪರಾರಿಯಾಗಿದ್ದು ಬಸೌನಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...