alex Certify ಉತ್ತರಖಂಡ್ ನಲ್ಲಿ ನಡೆದಿದೆ ಸಿನಿಮೀಯ ರೀತಿ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಖಂಡ್ ನಲ್ಲಿ ನಡೆದಿದೆ ಸಿನಿಮೀಯ ರೀತಿ ಘಟನೆ

ಕುಟುಂಬಕ್ಕೆ ಹೇಳದೆ ಕೆಲಸ ಹುಡುಕಿಕೊಂಡು ಮನೆಯಿಂದ ಹೊರಬಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 24 ವರ್ಷಗಳ ನಂತರ ಸಿನಿಮೀಯ ರೀತಿ ತನ್ನ ಕುಟುಂಬವನ್ನು ಸೇರಿಕೊಂಡು ಅಚ್ಚರಿ ಮೂಡಿಸಿದ್ದಾನೆ.

ಈ ಪ್ರಕರಣ ನಡೆದಿರುವುದು ಉತ್ತರಖಂಡ್ ದಲ್ಲಿ. 24 ವರ್ಷದ ಪ್ರಕಾಶ್ ಸಿಂಗ್, ಕೊರೊನಾ ಲಾಕ್ ಡೌನ್ ಕಾರಣದಿಂದ ತಮ್ಮ ಊರಿಗೆ ವಾಪಸ್ ಆಗಿದ್ದಾರೆ.

ಉತ್ತರಖಂಡ್ ರಾಜ್ಯದ ಭಾಗೇಶ್ವರ ಜಿಲ್ಲೆಯ ರಮಾಡಿ ಗ್ರಾಮಕ್ಕೆ ಸೇರಿದ ಪ್ರಕಾಶ್, ಕುಟುಂಬದವರಿಗೆ ಗ್ರಾಮಸ್ಥರಿಗೆ ಮೊದಲು ಪರಿಚಯ ಸಿಗಲಿಲ್ಲ, ಕುಟುಂಬದವರೂ ಯಾರು ಸಹ ಗುರುತಿಸಲು ಸಾಧ್ಯವಾಗಿರಲಿಲ್ಲ.

1995ರಲ್ಲಿ ಪ್ರೌಢಶಾಲಾ ಶಿಕ್ಷಣದ ನಂತರ ಕಾರ್ಕಿಯ ತನ್ನ ಹಳ್ಳಿಯನ್ನು ತೊರೆದಿದ್ದರು. ಮೊದಲು ದೆಹಲಿಗೆ ತೆರಳಿ ನಂತರ ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಬಳಿಕ ಗುಜರಾತ್ ನಲ್ಲಿ ಬೀಡು ಬಿಟ್ಟಿದ್ದರು. ಗಾರ್ಡನಿಂಗ್ ವೃತ್ತಿ ಮಾಡಿ ಬಳಿಕ ಈಗ ಎಲೆಕ್ಟ್ರೀಷಿಯನ್ ಆಗಿದ್ದಾರಂತೆ.

ಬಹು ವರ್ಷದ ನಂತರ ಎದುರಾದ ಮಗನನ್ನು ಕಂಡ ತಂದೆ-ತಾಯಿ ಖುಷಿಗೆ ಪಾರವೇ ಇಲ್ಲ. ‌ದೇವರು ದೊಡ್ಡವನು ಮತ್ತೆ ಒಂದು ಮಾಡಿದ್ದಾನೆಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...